ಮಾಜಿ CM ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ – ಪ್ರಕರಣಕ್ಕೆ ಸ್ಪೋಟಕ ತಿರುವು…..

Suddi Sante Desk

ಮಡಿಕೇರಿ –

ಕೊಡಗಿನ ಜಿಲ್ಲಾ ಪ್ರವಾಸವನ್ನು ಕೈಗೊಂಡಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಈಗ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ.ಹೌದು ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆ ಎಂಬುದಾಗಿ ಹೇಳಲಾಗುತ್ತಿತ್ತು ಈ ಒಂದು ವಿಚಾರವು ರಾಜ್ಯದಲ್ಲಿ ಸ್ಪೋಟಕ ತಿರುವು ಪಡೆದುಕೊಂಡಿದ್ದು ಈಗ ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದಾನೆ.

ಹೌದು ಮೊಟ್ಟೆ ಎಸೆದಿದ್ದು ಮಾತ್ರ ಕಾಂಗ್ರೆಸ್ ಕಾರ್ಯ ಕರ್ತ.ಅದನ್ನು ಸ್ವತಃ ಮೊಟ್ಟೆ ಎಸೆದ ವ್ಯಕ್ತಿಯೇ ಹೇಳಿದ್ದಾನೆ ಈ ಒಂದು ಸ್ಪೋಟಕ ವಿಚಾರ ವನ್ನು ಒಪ್ಪಿಕೊಂಡಿದ್ದು ಈಗ ಇದು ಹೊಸ ತಿರುವು ಪಡೆದುಕೊಂಡಿದೆ

ಇನ್ನೂ ಕಾಂಗ್ರೆಸ್ ಪಕ್ಷದಲ್ಲಿ ಹಿಂದೂಗಳಿಲ್ವಾ.? ಹಿಂದೂಗಳು ದನದ ಮಾಂಸ ತಿನ್ನುತ್ತಾರೆ ಎಂಬುದಾಗಿ ಸಿದ್ಧರಾಮಯ್ಯ ಹೇಳಿದ್ದರು.ಅವರು ಹೀಗೆ ಹೇಳಿದ್ದು ನೋವಾಗಿತ್ತು.ಇದೇ ಕಾರಣದಿಂದಾಗಿ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದೆ ಎಂದು ತಿಳಿಸಿದ್ದಾನೆ.ಸಂಪತ್ ಎಂಬಾತನು ನಾನು ಬಿಜೆಪಿ ಕಾರ್ಯಕರ್ತನಲ್ಲ.ಕಾಂಗ್ರೆಸ್ ಕಾರ್ಯಕರ್ತನೇ ಆಗಿದ್ದೇನೆ. ಸಿದ್ಧರಾಮಯ್ಯ ಹೇಳಿಕೆಯಿಂದ ಸಿಟ್ಟುಗೊಂಡು ಮೊಟ್ಟೆ ಎಸೆದಿರೋದಾಗಿ ಹೇಳಿದ್ದಾನೆ.

ಅಂದಹಾಗೇ ಸಿದ್ಧರಾಮಯ್ಯ ಕಾರಿನ ಮೇಲೆ ಮೊಟ್ಟ ಎಸೆದಿದ್ದಂತ ಸಂಪತ್ ಈ ಮೊದಲು ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿದ್ದನಂತೆ.ಕೆಲ ದಿನಗಳ ಹಿಂದಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದನಂತೆ.ಇದೀಗ ಆತ ಮೊಟ್ಟೆ ಎಸೆದ ಪ್ರಕರಣದಲ್ಲಿ ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರ ಬಂಧಿಸಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.