ನಾಳೆ ಕೊನೆಯ ಸಚಿವ ಸಂಪುಟದ ಸಭೆ – ನಾಳೆಯ ಪೈನಲ್ ಸಚಿವ ಸಂಪುಟ ಸಭೆಯಲ್ಲಿ ಏನೇನು ಚರ್ಚೆಯಾಗಲಿದೆ ಗೊತ್ತಾ ಕುತೂಹಲ ಕೆರಳಿಸಿದೆ ನಾಳೆಯ ಸಭೆ…

Suddi Sante Desk
ನಾಳೆ ಕೊನೆಯ ಸಚಿವ ಸಂಪುಟದ ಸಭೆ – ನಾಳೆಯ ಪೈನಲ್ ಸಚಿವ ಸಂಪುಟ ಸಭೆಯಲ್ಲಿ ಏನೇನು ಚರ್ಚೆಯಾಗಲಿದೆ ಗೊತ್ತಾ ಕುತೂಹಲ ಕೆರಳಿಸಿದೆ ನಾಳೆಯ ಸಭೆ…

ಬೆಂಗಳೂರು

ನಾಳೆ ರಾಜ್ಯ ಸರ್ಕಾರದ ಕೊನೆಯ ಸಚಿವ ಸಂಪುಟ ಸಭೆ ನಡೆಯಲಿದೆ ನಾಳೆ ನಡೆಯುವ ಈ ಒಂದು ಸಭೆಯಲ್ಲಿ ಹಲವಾರು ವಿಚಾರ ಗಳ ಕುರಿತು ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದ್ದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ಕೊನೆಯ ಸಚಿವ ಸಂಪುಟ ಸಭೆ ನಾಳೆ ಸಂಜೆ 4 ಗಂಟೆಗೆ ನಡೆಯುತ್ತಿದ್ದು ಹಲವು ಮಹತ್ವದ ತೀರ್ಮಾನ ಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಈ ಮೊದಲು ಸಚಿವ ಸಂಪುಟ ಸಭೆಯನ್ನು ಮಾರ್ಚ್ 23 ರ ಇಂದು ಬೆಳಿಗ್ಗೆ ನಡೆಸಲು ತೀರ್ಮಾನಿಸಲಾಗಿತ್ತಾದರೂ ಯುಗಾದಿ ಆಚರಣೆ ಗಾಗಿ ಬಹುತೇಕ ಎಲ್ಲ ಸಚಿವರು ತಮ್ಮ ತಮ್ಮ ಊರುಗಳಿಗೆ ತೆರಳಿರುವ ಕಾರಣ ಮಾರ್ಚ್ 24ಕ್ಕೆ ಈ ಒಂದು ಸಚಿವ ಸಂಪುಟದ ಸಭೆಯನ್ನು ಮುಂದೂಡಿಕೆ ಮಾಡಲಾಗಿತ್ತು

ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸ ಲಾತಿಗೆ ಒತ್ತಾಯಿಸಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದ ಕುರಿತಂತೆ ಹಾಗೆ ರಾಜ್ಯದ ಸರ್ಕಾರಿ ನೌಕರರ7ನೇ ವೇತನ ಆಯೋಗ ಜಾರಿಗೆ ಮತ್ತು ಶಿಕ್ಷಕರ ವರ್ಗಾವಣೆ ಅದಕ್ಕೆ ಪೂರಕವಾಗಿ ಒಂದು ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.