This is the title of the web page
This is the title of the web page

Live Stream

[ytplayer id=’1198′]

September 2025
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಶಿಕ್ಷಕರನ್ನು ವರ್ಗಾವಣೆ ಮಾಡಿ ವಿದ್ಯಾರ್ಥಿ ಗಳೊಂದಿಗೆ ಪೋಷಕರ ಪ್ರತಿಭಟನೆ – ಬಿಇಓ ಕಚೇರಿ ಮುಂದೆ ಬೃಹತ್ ಪ್ರಮಾಣದ ಪ್ರತಿಭಟನೆ…..

WhatsApp Group Join Now
Telegram Group Join Now

ಶಿರಸಿ –

ಹೌದು ಶಿರಸಿ ತಾಲ್ಲೂಕಿನ ದೇವಿಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನರಸಿಂಹ ಹೆಗಡೆ ಎಂಬುವವ ರನ್ನು ವರ್ಗಾವಣೆ ಮಾಡುವಂತೆ ವಿದ್ಯಾರ್ಥಿ ಪಾಲಕರು ಬಿಇಒ ಕಚೇರಿ ಎದುರು ಧರಣಿ ನಡೆಸಿದರು.ಶಿಕ್ಷಕರು ಮಕ್ಕ ಳಿಗೆ ಸರಿಯಾಗಿ ಪಾಠ ಹೇಳಿಕೊಡುತ್ತಿಲ್ಲ.ಶಾಲಾಭಿವೃದ್ಧಿ ಸಮಿತಿಯವರನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ.ಮಕ್ಕಳಿಗೆ ಕಲಿಕೆಗೆ ಪೂರಕ ವಾತಾವರಣ ಇಲ್ಲದೆ ಸಮಸ್ಯೆ ಉಂಟಾಗು ತ್ತಿದೆ.ಅವರು ಒಬ್ಬರೇ ಶಿಕ್ಷಕರು ಇರುವ ಕಾರಣ ವಿದ್ಯಾರ್ಥಿ ಗಳು ಶಾಲೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪಾಲಕರು ಆರೋಪಿಸಿದರು.

ಎಂಟು ಮಂದಿ ವಿದ್ಯಾರ್ಥಿಗಳಿದ್ದಾರೆ.ಅವರ ಶೈಕ್ಷಣಿಕ ಕಾಳಜಿ ಗಮನದಲ್ಲಿಟ್ಟುಕೊಂಡು ಶಾಲೆಗೆ ಬೇರೊಬ್ಬ ಶಿಕ್ಷಕ ರನ್ನು ನಿಯೋಜಿಸಬೇಕು.ಈಗಿರುವ ಶಿಕ್ಷಕರನ್ನು ವರ್ಗಾಯಿ ಸಬೇಕು ಎಂದು ಒತ್ತಾಯಿಸಿದರು.ಸಮಸ್ಯೆ ಆಲಿಸಿದ ಬಿಇಓ ಎಂ.ಎಸ್.ಹೆಗಡೆ ಪಾಲಕರ ದೂರನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ವಹಿಸುತ್ತೇವೆ ಎಂದು ಭರವಸೆ ನೀಡಿದರು.ಬಂಡಲ ಗ್ರಾಮ ಪಂಚಾಯ್ತಿ ಸದಸ್ಯ ದೇವರಾಜ ಮರಾಠಿ,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗೋಪಾಲ ಮರಾಠಿ,ಕೃಷ್ಣ ಮರಾಠಿ,ಅನಂತ ಮರಾಠಿ, ಗಣಪುಗೌಡ,ಉದಯ ಭಂಡಾರಿ,ಮುಕ್ತಾ ಗೌಡ, ಮಂಗಲಾ ಮರಾಠಿ,ಯಶೋದಾ ಮರಾಠಿ ಇದ್ದರು.


Google News

 

 

WhatsApp Group Join Now
Telegram Group Join Now
Suddi Sante Desk