ನವಲಗುಂದ –
ನವಲಗುಂದ ಬಸವೇಶ್ವರ ನಗರದಲ್ಲಿ ಶಾಸಕ ಎನ್ ಹೆಚ್ ಕೊನರೆಡ್ಡಿ ಯವರಿಗೆ ಸನ್ಮಾನ ಗೌರವ ಶಾಸಕರಾದ ನಂತರ ಮೊದಲ ಬಾರಿಗೆ ತೆರಳಿದ ಶಾಸಕರಿಗೆ ಪ್ರೀತಿಯ ಸನ್ಮಾನ ಗೌರವ ನಿವಾಸಿಗಳಿಂದ ಬೇಡಿಕೆಗಳ ಕುರಿತಂತೆ ಮನವಿ
ಹೌದು ಶಾಸಕರಾದ ನಂತರ ಮೊದಲ ಬಾರಿಗೆ ಧಾರವಾಡ ಜಿಲ್ಲೆಯ ನವಲಗುಂದ ವಿಧಾನ ಸಭಾ ಕ್ಷೇತ್ರದ ಶಾಸಕ ಎನ್ ಹೆಚ್ ಕೊನರೆಡ್ಡಿ ಪಟ್ಟಣದ ಬಸವೇಶ್ವರ ನಗರಕ್ಕೆ ಭೇಟಿ ನೀಡಿದ್ದಾರೆ.
ಬಡಾವಣೆಗೆ ಆಗಮಿಸಿದ ನೂತನ ಶಾಸಕರನ್ನು ನಿವಾಸಿಗಳು ಪ್ರೀತಿಯಿಂದ ಸ್ವಾಗತಿಸಿ ಬರಮಾಡಿ ಕೊಂಡರು ಇದೇ ವೇಳೆ ಬಡಾವಣೆಯಲ್ಲಿನ ಕುಂದು ಕೊರತೆಗಳ ಕುರಿತಂತೆ ನಿವಾಸಿಗಳು ಮತ್ತು ಹಿರಿಯರೊಂದಿಗೆ ಶಾಸಕ ಎನ್ ಹೆಚ್ ಕೊನರೆಡ್ಡಿ ಯವರು ಚರ್ಚೆ ಮಾಡಿ ಮಾಹಿತಿ ಯನ್ನು ಪಡೆದುಕೊಂಡರು
ಇನ್ನೂ ಈ ಒಂದು ಸಮಯದಲ್ಲಿ ಕೆಲವೊಂದಿಷ್ಟು ಬೇಡಿಕೆಘಳ ಕುರಿತಂತೆ ನಿವಾಸಿಗಳು ನೂತನ ಶಾಸಕರಿಗೆ ಬೇಡಿಕೆಗಳ ಪಟ್ಟಿಯನ್ನು ನೀಡಿದರು. ಇದರೊಂದಿಗೆ ಬಸವೇಶ್ವರ ನಗರಕ್ಕೆ ಆಗಮಿಸಿದ ನೂತನ ಶಾಸಕರಿಗೆ ನಿವಾಸಿಗಳು ಪ್ರೀತಿಯಿಂದ ಸನ್ಮಾನಿಸಿ ಗೌರವಿಸಿ ಶುಭ ಹಾರೈಸಿದರು.
ಬರುವ ದಿನಗಳಲ್ಲಿ ಇನ್ನೂ ಹೆಚ್ಚೇಚ್ಚು ಅಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡಲಿ ನಿಮ್ಮೊಂದಿಗೆ ನಾವುಗಳು ಇರುತ್ತೇವೆ ಎಂಬ ಭರವಸೆಯನ್ನು ಮಾತುಗಳನ್ನು ನಿವಾಸಿಗಳು ನೂತನ ಶಾಸಕರಿಗೆ ನೀಡಿದರು.
ಸುದ್ದಿ ಸಂತೆ ನ್ಯೂಸ್ ನವಲಗುಂದ…..