ಪತ್ನಿಯ ಆತ್ಮಹತ್ಯೆ ಬೆನ್ನಲ್ಲೇ ಅದೇ ಸ್ಥಳದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ Tv ಕ್ಯಾಮೆರಾ ಮೆನ್ – ನಾಡಿನೆಲ್ಲೆಡೆ ಪತ್ರಕರ್ತ ಬಂಧುಗಳಿಂದ ಭಾವಪೂರ್ಣ ನಮನ ಸಂತಾಪ…..

Suddi Sante Desk

ಬೆಂಗಳೂರು –

ಪತ್ನಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಟಿವಿ ಚಾನೆಲ್ ಕ್ಯಾಮೆರಾ ಮೆನ್ ರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಪತ್ನಿ ವಿಯೋಗದಿಂದ ತೀವ್ರವಾಗಿ ನೊಂದಕೊಂಡಿದ್ದ ಟಿವಿ ಚಾನೆಲ್ ಕ್ಯಾಮರಾ ಮನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದು ಜೆಪಿ ನಗರದ ನಿವಾಸಿ ಆಗಿರುವ ಕನ್ನಡ ಸುದ್ದಿ ವಾಹಿನಿ ಯಲ್ಲಿ ಕ್ಯಾಮೆರಾಮನ್ ಆಗಿ ಕೆಲಸ ಮಾಡುತ್ತಿದ್ದ ಕ್ಯಾಮೆರಾ ಮನ್ ನಾಗೇಶ್ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.

ನಾಗೇಶ್ ಪತ್ನಿ ಕೆಲ ದಿನಗಳ ಹಿಂದಷ್ಟೇ ಆತ್ಮಹತ್ಯೆಗೆ ಶರಣಾಗಿದ್ದರು.ಪತ್ನಿ ವಿಯೋಗದಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.ದುರಂತ ಎಂದರೆ ನಾಗೇಶ್ ಆತ್ಮಹತ್ಯೆಗೆ ಶರಣಾದ ತನ್ನ ಪತ್ನಿಯ ಜಾಗದಲ್ಲೇ ನಾಗೇಶ್ ಕೂಡ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಎರಡು ಮಕ್ಕಳು ಅನಾಥವಾಗಿವೆ.ನಾಗೇಶ್ ದಂಪತಿ ಕೆಲವೇ ದಿನಗಳ ಅಂತರದಲ್ಲಿ ಸೂಸೈಡ್ ಮಾಡಿಕೊಂಡಿದ್ದು ಪ್ರೀತಿ-ವಿಶ್ವಾಸ ಅನ್ಯೋನ್ಯತೆಯಿಂದಲೇ ಇದ್ದ ದಂಪತಿ ಆತ್ಮಹತ್ಯೆ ಮಾಡಿ ಕೊಂಡಿದ್ದೇಕೆ ಎನ್ನುವುದು ಹಲವು ಕಾರಣಗಳನ್ನು ಹುಟ್ಟು ಹಾಕಿದೆ. ಪಬ್ಲಿಕ್ ಟಿವಿ ಮೂಲಕ ತನ್ನ ವೃತ್ತಿ ಆರಂಭಿಸಿದ್ದ ನಾಗೇಶ್ ಕೆಲವು ವರ್ಷ ಸೇವೆ ಸಲ್ಲಿಸಿದ ನಂತರ ನ್ಯೂಸ್- 18 ಕನ್ನಡದಲ್ಲಿ ಕೆಲಸ ಮಾಡಿದ್ದರು.

ಇತ್ತೀಚೆಗೆ ಖಾಸಗಿ ಕಾರ್ಯಕ್ರಮಗಳ ಚಿತ್ರೀಕರಣ ಮಾಡುವ ಕೆಲಸ ಆರಂಭಿಸಿದ್ದರು.ನಾಗೇಶ್ ಗೆ ಇದು ಎರಡನೇ ಮದುವೆ ಎಂದು ಹೇಳಲಾಗಿದೆ.ಮೊದಲ ಹೆಂಡತಿಯಿಂದ ಬೇರೆಯಾಗಿ ಎರಡನೇ ಮದುವೆಯಾಗಿದ್ದ ನಂತೆ. ಇದೇ ವಿಷಯದಲ್ಲಿ ಆಗಾಗ ದಂಪತಿ ನಡುವೆ ಜಗಳ ಆಗುತ್ತಿತ್ತು ಎಂದು ಹೇಳಲಾಗಿದೆ.ನಾಗೇಶ್ ಸಾವಿಗೆ ದೃಶ್ಯ ಹಾಗೂ ಮುದ್ರಣ ಮಾದ್ಯಮದ ಛಾಯಾಗ್ರಾಹಕರು ಶೋಕ-ಸಂತಾಪ ವ್ಯಕ್ತಪಡಿಸಿದ್ದಾರೆ.ಬೆಂಗಳೂರು ವಿಡಿಯೋ ಜರ್ನಲಿಸ್ಟ್ ಅಸೋಸಿಯೇಷನ್ ಸಂತಾಪ ವನ್ನು ಸೂಚಿಸಿದ್ದು ಪೊಲೀಸರು ತನಿಖೆಯನ್ನು ಮಾಡ್ತಾ ಇದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.