ಧಾರವಾಡ –
ಚಾಕು ಇರಿತ ಪ್ರಕರಣ ಇಬ್ಬರು ಆರೋಪಿಗಳ ಬಂಧನ – ಆಟೊ ದಲ್ಲಿ ಬಂದು ಚಾಕು ಇರಿದು ಎಸ್ಕೇಫ್ ಆಗಿದ್ದವರನ್ನು ಬಂಧನ ಮಾಡಿದ ಉಪನಗರ ಪೊಲೀಸರು ಹೌದು ಧಾರವಾಡದ ಎಲ್ ಐ ಸಿ ಬಳಿ ಆಟೊ ದಲ್ಲಿ ಬಂದು ಮೂವರಿಗೆ ಚಾಕು ಇರಿತ ಪ್ರಕರಣ ಕುರಿತಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.
ನಿನ್ನೆ ಮಧ್ಯಾಹ್ನ ಈ ಒಂದು ಪ್ರಕರಣ ನಡೆದಿತ್ತು ಯುವತಿ ವಿಚಾರಕ್ಕೆ ಈ ಒಂದು ಜಗಳವು ಯುವಕರ ನಡುವೆ ನಡೆದಿತ್ತು ಎಂಬ ವಿಚಾರ ವನ್ನು ಪೊಲೀಸರು ಪ್ರಾಥಮಿಕ ತನಿಖೆಯಿಂದ ತಿಳಿದುಕೊಂಡಿದ್ದು ಸಧ್ಯ ಚಾಕು ಇರಿತಕ್ಕೊಳ ಗಾಗಿರುವ ಮೂವರಿಗೆ ಸಣ್ಣಪುಟ್ಟ ಗಾಯಗಳಾ ಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊ ಳ್ಳುತ್ತಿದ್ದಾರೆ.
ಇನ್ನೂ ಯುವತಿ ವಿಚಾರದಲ್ಲಿ ಗಲಾಟೆಯಾಗಿ ಕೃತ್ಯ ಎಸಗಿದ್ಧಾರೆ ಎಂದು ಪೊಲೀಸರು ತಿಳಿಸಿ ದ್ದಾರೆ.ಮುಗದ ಗ್ರಾಮದ ಕಿರಣ್, ಧಾರವಾಡ ಆಸೀಫ್ ಹುನಗುಂದ ಹಾಗೂ ಶಾನುವಾಜ್ ಅವರಿಗೆ ಹೊಟ್ಟೆ ಮತ್ತು ಬೆನ್ನಿಗೆ ಇರಿಯಲಾಗಿದೆ.
ಮೂವರನ್ನು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ದಾಖಲಿಸ ಲಾಗಿದೆ.ಅಮ್ಮಿನಭಾವಿಯ ಯವತಿಯೊಬ್ಬರ ವಿಚಾರದಲ್ಲಿ ಕಿರಣ್ ಮತ್ತು ಸಾಹಿಲ್ ನಡುವೆ ಗಲಾಟೆ ನಡೆದಿದೆ.ಸಾಹಿಲ್ ಸಹಿತ ನಾಲ್ವರು ಆಟೊ ರಿಕ್ಷಾದಲ್ಲಿ ಬಂದು ಕೃತ್ಯ ಎಸಗಿದ್ಧಾರೆ ಎಂದು ಗೊತ್ತಾಗಿದೆ.
ಘಟನೆ ನಡೆದು ಕೆಲವೆ ಘಂಟೆಗಳಲ್ಲಿ ಉಪನಗರ ಪೊಲೀಸ್ ಇನಸ್ಪೇಕ್ಟರ್ ನೇತ್ರತ್ವದಲ್ಲಿನ ಟೀಮ್ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ.ಸಧ್ಯ ಈ ಕುರಿತಂತೆ ಇಬ್ಬರನ್ನು ವಶಕ್ಕೆ ತಗೆದುಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..