ACB ಬಲೆಗೆ ಬಿದ್ದ ಇಬ್ಬರು ಭ್ರಷ್ಟ ಸರ್ಕಾರಿ ಅಧಿಕಾರಿಗಳು – ನಿವೃತ್ತ ಸಿಬ್ಬಂದಿಯ ವೇತನಕ್ಕೆ 1 ಲಕ್ಷ ಡಿಮಾಂಡ್ ಮಾಡಿದ್ದ ಭೂಪರು

Suddi Sante Desk

ಹಾವೇರಿ –

ACB ಬಲೆಗೆ ಇಬ್ಬರು ಭ್ರಷ್ಟ ಸರ್ಕಾರಿ ಅಧಿಕಾರಿಗಳು ಬಿದ್ದಿದ್ದಾರೆ.ಹೌದು ಅಲ್ಲಿ ಇಡಿ ದಾಳಿ ಇತ್ತ ಎಸಿಬಿ ದಾಳಿ ಮಾಡಿ ಇಬ್ಬರು ಅಧಿಕಾರಿಗಳ‌ನ್ನು ಟ್ರ್ಯಾಪ್ ಮಾಡಲಾಗಿದೆ.ಹಾವೇರಿ ಯಲ್ಲಿ ಈ ಒಂದು ದಾಳಿ ನಡೆದಿದೆ.

ಹೌದು ಎಸಿಬಿ ಬಲೆಗೆ ಹಾವೇರಿ ಯಲ್ಲಿ ಇಬ್ಬರು ಭ್ರಷ್ಟ ಅಧಿಕಾರಿಗಳು ಬಲೆಗೆ ಬಿದ್ದಿದ್ದಾರೆ.ಹಾವೇರಿಯ ಬಸ್ ನಿಲ್ದಾಣದ ಬಳಿ ಈ ಒಂದು ದಾಳಿಯನ್ನು ಮಾಡಲಾಗಿದೆ.ಜಂಟಿ ಕೃಷಿ ನಿರ್ದೆಶಕರ ಕಚೇರಿ ಯಲ್ಲಿ ಆಡಳಿತಾಧಿಕಾರಿ ಆಗಿರುವ ಶ್ರೀಕಾಂತ್ ಹುಣಸಿಮರದ & ಪ್ರಥಮ ದರ್ಜೆ ಸಹಾಯಕ ಚನ್ನವೀರಯ್ಯ ಹಿರೇಮಠ ಎಂಬ ಇಬ್ಬರ ಮೇಲೆ ಅಧಿಕಾರಿಗಳು ದಾಳಿ ಮಾಡಿ ಬಂಧನವನ್ನು ಮಾಡಿದ್ದಾರೆ

ನಿವೃತ್ತ ಸಿಬ್ಬಂದಿಯ ವೇತನಕ್ಕೆ 1 ಲಕ್ಷ ಡಿಮಾಂಡ್ ಮಾಡಿದ್ದರು ಈ ಇಬ್ಬರು ಭೂಪರು.ಇಂದು ₹ 15000 ತೆಗೆದುಕೊಳ್ಳುವಾಗ ಸಿಕ್ಕಿಬಿದ್ದಿದ್ದಾರೆ ಭ್ರಷ್ಟ ಅಧಿಕಾರಿಗಳು.ನಿವೃತ್ತ ಕೃಷಿ ಅಧಿಕಾರಿ ಚನ್ನಬಸಪ್ಪ ಕೋರಿ ಎಂಬುವವರ ಬಳಿ ಹಣದ ಬೇಡಿಕೆ ಇಟ್ಟಿದ್ದರು

ಹಾವೇರಿಯ ಹೊಸಕಿತ್ತೂರು ಗ್ರಾಮದಲ್ಲಿ ವಾಸವಾ ಗಿದ್ದ ನಿವೃತ್ತ ಅಧಿಕಾರಿ.ಈ ಹಿಂದೆ 50,000 ಸಾವಿರ ರೂ ಹಣ ಪಡದಿದ್ದರು ಭ್ರಷ್ಟ ಅಧಿಕಾರಿಗಳು.ACB ಎಸ್‌ಪಿ ಜಯಪ್ರಕಾಶ್ ಮಾರ್ಗದರ್ಶನದಲ್ಲಿ ಈ ಒಂದು ದಾಳಿ ನಡೆದಿದೆ.ಡಿವೈಎಸ್ಪಿ ಮಾಹಾಂತೇಶ್ ಜಿದ್ದಿ ಹಾಗೂ ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.