ಪ್ರೇಮಿಗಳಿಬ್ಬರು ಆತ್ಮಹತ್ಯೆ – ನಾಲ್ಕು ವರ್ಷದ ಪ್ರೀತಿಯ ಮದುವೆಗೆ ವಿರೋಧಕ್ಕೆ – ನೇಣಿಗೆ ಶರಣಾದ ಪ್ರೇಮಿಗಳು

Suddi Sante Desk

ಯಾದಗಿರಿ –

ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಹೌದು ಮನೆಯಲ್ಲಿನ ಕಬ್ಬಿಣದ ಪೈಪ್‌ಗೆ ನೇಣು ಬಿಗಿದುಕೊಂಡು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ನಡೆದಿದೆ.

ಗುಂಡಗುರ್ತಿ ಗ್ರಾಮದ 23 ವರ್ಷದ ಶರಣಬಸವ ಮತ್ತು 19 ವರ್ಷದ ಶೇಖಮ್ಮ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಗಾಡವಾಗಿ ಪ್ರೀತಿಸುತ್ತಿದ್ದರು.

ಆದರೆ ಇಬ್ಬರ ಪ್ರೀತಿಗೆ ಎರಡು ಮನೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಂತೆ ಇದರಿಂದ ಮನನೊಂದು ಮನೆಯಲ್ಲೇ ಕಬ್ಬಿಣದ ಪೈಪ್‌ಗೆ ಹಗ್ಗದಿಂದ‌ ನೇಣು ಬಿಗಿದುಕೊಂಡು ಬಾರದ ಲೋಕಕ್ಕೆ ತೆರಳಿದ್ದಾರೆ.

ಇನ್ನೂ ಸ್ಥಳಕ್ಕೆ ಯಾದಗಿರಿ ಎಸ್ಪಿ ಋಷಿಕೇಶ್ ಭಗವಾನ್, ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಶಹಾಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.