ಮತ ಎಣಿಕೆಗೆ ಬರುತ್ತಿದ್ದ ಕಾರು ಅಪಘಾತ – ಇಬ್ಬರು ಸಾವು

Suddi Sante Desk

ಹಾವೇರಿ – ಮಂಚಾಯಿತಿ ಚುನಾವಣೆ ಮತ ಎಣಿಕೆಗೆ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ತುಂಗಾ ಮೇಲ್ಡಂಡೆ ಕಾಲುವೆಗೆ ಉರುಳಿಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ಬಸವನಕಟ್ಟಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಮೃತರನ್ನು ಪ್ರಕಾಶ ಬನ್ನಿಮಟ್ಟಿ (40) ಹಾಗೂ ಸಿದ್ದನಗೌಡ ಬಿಷ್ಟನಗೌಡರ (45) ಎಂದು ಗುರುತಿಸಲಾಗಿದೆ.

ಅಭ್ಯರ್ಥಿ ಪರ ಮತ ಎಣಿಕೆಯ ಏಜೆಂಟ್ ಆಗಿ ಪ್ರಕಾಶ್ ಹಾವೇರಿಗೆ ಬರುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಲುವೆಗೆ ಉರುಳಿಬಿದ್ದಿದೆ.

ಇನ್ನೂ ವಿಷಯ ತಿಳಿದ ಹಾವೇರಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.