This is the title of the web page
This is the title of the web page

Live Stream

[ytplayer id=’1198′]

December 2025
T F S S M T W
 123
45678910
11121314151617
18192021222324
25262728293031

| Latest Version 8.0.1 |

National News

ಪ್ರಹ್ಲಾದ್ ಜೋಶಿ ನನ್ನ ಗುರು ಪಾರ್ಲಿಮೆಂಟ್ ನಡಾವಳಿ ಕಲಿಸಿ ಕೊಟ್ಟವೆಂದರು ಕೇಂದ್ರ ಸಚಿವ ಅಶ್ವಿನೀ ವೈಷ್ಣವ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತವರೂರಿನಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ ಕೇಂದ್ರ ಸಚಿವರು

ಪ್ರಹ್ಲಾದ್ ಜೋಶಿ ನನ್ನ ಗುರು ಪಾರ್ಲಿಮೆಂಟ್ ನಡಾವಳಿ ಕಲಿಸಿ ಕೊಟ್ಟವೆಂದರು ಕೇಂದ್ರ ಸಚಿವ ಅಶ್ವಿನೀ ವೈಷ್ಣವ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತವರೂರಿನಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ ಕೇಂದ್ರ ಸಚಿವರು
WhatsApp Group Join Now
Telegram Group Join Now

ಹುಬ್ಬಳ್ಳಿ

 

ಪ್ರಹ್ಲಾದ್ ಜೋಶಿ ನನ್ನ ಗುರು ಪಾರ್ಲಿಮೆಂಟ್  ನಲ್ಲಿ ಮಾತನಾಡುವುದನ್ನು ಹಾಗೇ ನಡಾವಳಿ ಯನ್ನು ಕಲಿಸಿ ಕೊಟ್ಟು ನನ್ನ ಪ್ರತಿಯೊಂದು ಬೆಳವಣಿಗೆಯಲ್ಲೂ ಅವರೇ ಪ್ರಮುಖ ಕಾರಣ ಎಂದು ಕೇಂದ್ರ ರೇಲ್ವ ಸಚಿವ ಅಶ್ವಿನೀ ವೈಷ್ಣವ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತವರೂರಿನಲ್ಲಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು ಕೇಂದ್ರ ಸಚಿವರು.

 

 

ಪಂ. ಸವಾಯಿ ಗಂಧರ್ವರ ಅಂಚೆ ಚೀಟಿ ಬಿಡುಗಡೆ ಸಮಾರಂಭದಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಅಶಿನೀ ವೈಷ್ಣವ.ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬಗ್ಗೆ ಮಾತನಾಡುವುದು ನಮ್ಮ ಸೌಭಾಗ್ಯ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನನ್ನ ಗುರು ಪಾರ್ಲಿಮೆಂಟ್ ನಡಾವಳಿ ಬಗ್ಗೆ ಜೋಶಿ ನನಗೆ ಕಲಿಸಿಕೊಟ್ಟಿದ್ದಾರೆ. ಲೋಕಸಭೆ ಯಲ್ಲಿ ಪ್ರತಿಯೊಂದು ಹೆಚ್ಚೆ ಭಾಷಣ ಮಾಡೋ ದನ್ನ ಪ್ರಹ್ಲಾದ ಜೋಶಿ ಕಲಿಸಿದ್ದಾರೆ.ಅಧಿಕಾರ, ಸ್ಥಾನ ಬಂದನಂತರ ಮನುಷ್ಯ ಬದಲಾಗ್ತಾನೆ. ವಿರೋಧ ಪಕ್ಷದ ನಾಯಕರೂ ಪ್ರಹ್ಲಾದ ಜೋಶಿ ಅವರನ್ನ ಗೌರವಿಸ್ತಾರೆ.

 

ಈ ಕಾರ್ಯಕ್ರಮ ಬಹಳ ಭಾವನಾತ್ಮಕವಾಗಿದ್ದು ದೇಶಾದ್ಯಂತ ಧಾರವಾಡ ಜಿಲ್ಲೆಯ ಹೆಸರನ್ನ ಪರಿಚಯಿಸಿದವರು ಪಂ. ಸವಾಯಿ ಗಂಧರ್ವರು. ನಮ್ಮ ಗುಲಾಮ ಸಂಸ್ಕೃತಿಯಿಂದ ಹೊರ ಬರಬೇ ಕೆಂದು ಪ್ರಧಾನಿ ಹೇಳಿದ್ದರು‌.ಅದೇ ತರನಾಗಿ ಪ್ರಧಾನಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಪ್ರಧಾನಿ ಬಂದ ನಂತರ ಅನೇಕ ಸರ್ಕಾರದ ಶಿಷ್ಟಾಚಾರಕ್ಕೆ ಬ್ರೇಕ್ ಹಾಕಿದ್ದಾರೆ.ಸಮಾಜ, ಸಂಸ್ಕೃತಿಗೆ ಅನೇಕ ಮಹನೀಯರ ಕೊಡುಗೆ ಇದೆ.ಅಂಥವರನ್ನ ಗುರುತಿಸುವ ಕೊಲಸ ಮೋದಿ ಮಾಡ್ತಿದ್ದಾರೆ.ಪಂ. ಕುಮಾರ ಗಂಧರ್ವರ ಅವರ ಸಂಗೀತವನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇಷ್ಟಪಡುತ್ತಿದ್ದರು.

 

 

https://youtu.be/QMXxWhoyRml

 

ಬ್ರಿಟೀಷ್ ಗವರ್ನರ್ ಎದುರು ಸವಾಯಿ ಗಂಧರ್ವರು ಸತತ ಮೂರು ಗಂಟೆ ಸಂಗೀತ ಕಚೇರಿ ನಿಡಿದ್ದರು.ಸಂಗೀತ ಕೇಳಿದ ಎಲ್ಲ ಜನ ಮಂತ್ರಮುಗ್ಧರಾಗಿದ್ದರು.ಮೂರು ಗಂಟೆಗಳ ಬಳಿಕ ಗವರ್ನ್ ಎದ್ದು ಗೌರವ ಸಲ್ಲಿಸಿದ್ದರೆಂದರು. ಸಂಗೀತಕ್ಕಿರುವ ಶಕ್ತಿಯನ್ನ ಸವಾಯಿ ಗಂಧರ್ವ ರು ಬ್ರಿಟೀಷರಿಗೆ ಪರಿಚಯಿಸಿದ್ದರು.ಕಲೆ, ಸಂಸ್ಕೃತಿ ಶಿಕ್ಷಣದಿಂದ ಸವಾಯಿ ಗಂಧರ್ವರು ಪರೀಪೂ ರ್ಣರು ಡಾ.ಗಂಗೂಬಾಯಿ ಹಾನಗಲ್ ಹಾಗೂ ಪಂ. ಭೀಮಸೇನ ಜೋಶಿಯವರ ಶಿಷ್ಯರನ್ನ ನಾಡಿಗೆ ಕೊಟ್ಟಿದ್ದೇ ಸವಾಯಿ ಗಂಧರ್ವರ ಈ ಒಂದು ನೆಲದಲ್ಲಿನ ಪ್ರಹ್ಲಾದ್ ಜೋಶಿ ಯವರು ನನಗೆ ಗುರುವಾಗಿದ್ದು ನನ್ನ ಪುಣ್ಯ ಇದೊಂದು ನನ್ನ ಸೌಭಾಗ್ಯ ಎನ್ನುತ್ತಾ ಸಚಿವರ ತವರೂರಿನಲ್ಲಿ ಕೇಂದ್ರ ಸಚಿವರು ಮೆಚ್ಚುಗೆಯ ಮಾತುಗಳನ್ನು ಹೇಳಿದರು.


Google News

 

 

WhatsApp Group Join Now
Telegram Group Join Now
Suddi Sante Desk