ಹುಬ್ಬಳ್ಳಿ –
2023 – 24ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಧಾರವಾಡ ಜಿಲ್ಲೆಯಲ್ಲಿನ ಸಾಮಾನ್ಯ ಮತ್ತು ರೈಲ್ವೆ ಇಲಾಖೆಗೆ ಸಂಬಂಧಿಸಿದ ಬೇಕು ಬೇಡಿಕೆಗಳ ಕುರಿತಂತೆ ಸೇರಿಸಲು ಹಾಗೂ ಚರ್ಚಿಸಲು ಮತ್ತು ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು ಸಭೆಯನ್ನು ಕರೆದಿದ್ದಾರೆ.
ಹೌದು ನಾಳೆ ಹುಬ್ಬಳ್ಳಿಯಲ್ಲಿ ಮಧ್ಯಾಹ್ನ 2 30 ಕ್ಕೆ ನಗರದ ಚೇಂಬರ್ ಆಫ್ ಕಾರ್ಮಸ್ ಸಂಸ್ಥೆಯಲ್ಲಿ ಆರ್ಥಿಕ ತಜ್ಞರು ಮತ್ತು ಸಾರ್ವಜನಿಕರೊಂದಿಗೆ ಸಂವಾದ ಮಾಡುವ ನಿಟ್ಟಿನಲ್ಲಿ ಈ ಒಂದು ಸಂವಾ ದವನ್ನು ಕರೆದಿದ್ದು ಪ್ರಮುಖವಾಗಿ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಈ ಭಾಗದ ಬೇಕು ಬೇಡಿಕೆಗಳ ಕುರಿತಂತೆ ಹಾಗೇ ಇನ್ನೂ ಕೆಲವೊಂ ದಿಷ್ಟು ವಿಚಾರಗಳನ್ನು ಸೇರ್ಪಡೆ ಮಾಡುವ ಕುರಿತಂತೆ ಕೇಂದ್ರ ಸಚಿವರು ಈ ಒಂದು ಸಂವಾದ ವನ್ನು ಕರೆದಿದ್ದು ಹೀಗಾಗಿ ಈ ಒಂದು ಸಂವಾದ ಕಾರ್ಯಕ್ರಮವೂ ತುಂಬಾ ಮಹತ್ವವನ್ನು ಪಡೆದು ಕೊಂಡಿದ್ದು ನಿಜಕ್ಕೂ ಇದೊಂದು ಅರ್ಥಪೂರ್ಣ ವಾದ ಕಾರ್ಯಕ್ರಮವಾಗಿದ್ದು ಹೀಗಾಗಿ ನಾಳೆಯ ಈ ಒಂದು ಸಂವಾದ ಕಾರ್ಯಕ್ರಮದಲ್ಲಿ ಈ ಭಾಗಕ್ಕೆ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಏನೇನು ಬೇಡಿಕೆಗಳ ಪಟ್ಟಿಯನ್ನು ಆರ್ಥಿಕ ತಜ್ಞರು ಸಾರ್ವ ಜನಿಕರು ನೀಡುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.
ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..