ಇಂದಿನಿಂದ ಉತ್ತರ ಕರ್ನಾಟಕದ ಜನತೆಗೆ ಮತ್ತೊಂದು ಸೇವೆ ಒದಗಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ನಗರಕ್ಕೆ ಆಗಮಿಸಿದ ವಿಮಾನಕ್ಕೆ ಸ್ವಾಗತ ಕೋರಿ ಪ್ರಸ್ತಾವಣೆಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರಿಗೆ ಅನಂತ ಧನ್ಯವಾದಗಳನ್ನು ಸಲ್ಲಿಸಿದ ಪ್ರಹ್ಲಾದ್ ಜೋಶಿಯವರು

Suddi Sante Desk
ಇಂದಿನಿಂದ ಉತ್ತರ ಕರ್ನಾಟಕದ ಜನತೆಗೆ ಮತ್ತೊಂದು ಸೇವೆ ಒದಗಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ನಗರಕ್ಕೆ ಆಗಮಿಸಿದ ವಿಮಾನಕ್ಕೆ ಸ್ವಾಗತ ಕೋರಿ ಪ್ರಸ್ತಾವಣೆಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ  ಕೇಂದ್ರ ಸಚಿವರಿಗೆ ಅನಂತ ಧನ್ಯವಾದಗಳನ್ನು ಸಲ್ಲಿಸಿದ ಪ್ರಹ್ಲಾದ್ ಜೋಶಿಯವರು

ಹುಬ್ಬಳ್ಳಿ

ಸದಾ ಒಂದಿಲ್ಲೊಂದು ಒಂದರ ಮೇಲೊಂದರಂತೆ ಮತ್ತೊಂದು ಜಿಲ್ಲೆಗಳಿಗೆ ಅಭಿವೃದ್ದಿ ಕೆಲಸ ಕಾರ್ಯ ಗಳನ್ನು ಯೋಜನೆಗಳನ್ನು ತರುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಈಗ ಮತ್ತೊಂದು ಹೊಸ ಸೇವೆಯನ್ನು ಆರಂಭ ಮಾಡಿ ದ್ದಾರೆ.ಹೌದು ಈಗಾಗಲೇ ಹುಬ್ಬಳ್ಳಿಯ ನಗರ ದಿಂದ ದೇಶದ ಪ್ರಮುಖ ನಗರಗಳಿಗೆ ನೇರವಾಗಿ ವಿಮಾನದ ಸೇವೆಯನ್ನು ಆರಂಭ ಮಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಪ್ರಯತ್ನ ದಿಂದಾಗಿ ಈಗ ಹುಬ್ಬಳ್ಳಿಯಿಂದ ಪುಣೆ ನಗರಕ್ಕೆ ನೇರವಾಗಿ ವಿಮಾನಯಾನ ಆರಂಭ ವಾಗಿದೆ

ಪುಣೆ ನಗರದಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಂಡಿಗೋ ವಿಮಾನವನ್ನು ಸ್ವಾಗತ ಮಾಡಲಾಯಿತು.ಹುಬ್ಬಳ್ಳಿಯಿಂದ ಪುಣೆಗೆ ನೇರ ವಾಗಿ ಸಂಪರ್ಕಿಸುವ ವಿಮಾನಯಾನ ಆರಂಭ ವಾಗಿದ್ದು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿ ಸಿದ ಇಂಡಿಗೋ ವಿಮಾನಕ್ಕೆ ಜಲಫಿರಂಗಿಯ ಮೂಲಕ ಸ್ವಾಗತವನ್ನು ನೀಡಲಾಯಿತು.

ಮೊದಲ ದಿನವೇ ವಿಮಾನವು ಪ್ರಯಾಣಿಕರಿಂದ ಸಂಪೂರ್ಣ ಭರ್ತಿಯಾಗುವ ಮೂಲಕ ಈ‌ ಸೇವೆಯು ಜನರಿಗೆ ಅನುಕೂಲಕರವಾಗಿದೆ ಎಂಬುದು ಖುಷಿಯ ಸಂಗತಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ತಮ್ಮ ಉಲ್ಲೇ ಖವನ್ನು ಮಾಡಿದ್ದಾರೆ.ಇನ್ನೂ ಇದರಿಂದ ಹುಬ್ಬಳ್ಳಿ ಧಾರವಾಡ ಅವಳಿ ನಗರ ಹಾಗೂ ಇಡೀ ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗ ಲಿದೆ ಎಂದು ಹೇಳಿದ್ದು

ನಮ್ಮ ಪ್ರಸ್ತಾವನೆಗೆ ಸ್ಪಂದಿಸಿ ವಿಮಾನಯಾನ ಸೇವೆ ಆರಂಭಿಸಿದ್ದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರಿಗೂ ಹಾಗೂ ಕೇಂದ್ರ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಇಂಡಿಗೋ ಸಂಸ್ಥೆಗೆ ಅನಂತ ಧನ್ಯವಾದಳನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಸಲ್ಲಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.