ಗೌರಿಬಿದನೂರು ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಮುಖ್ಯ ಶಿಕ್ಷಕರಿಗೆ ಜರೂರ ಸಂದೇಶವೊಂದನ್ನು ರವಾನಿಸಿದ್ದಾರೆ.ಈ ಒಂದು ಸಂದೇಶಗಳು ಕೇವಲ ಅಲ್ಲಿಯ ಶಿಕ್ಷಕ ಬಂಧುಗಳಿಗೆ ಅಷ್ಟೇ ಸಿಮೀತ ವಾಗದೆ ರಾಜ್ಯದ ಎಲ್ಲಾ ಶಿಕ್ಷಕರಿಗೆ ಅನುಕೂಲ ಆಗಲಿವೆ ಸಧ್ಯದ ಪರಿಸ್ಥಿತಿಯಲ್ಲಿ
ತಾಲೂಕಿನ ಎಲ್ಲಾ ಮುಖ್ಯ ಶಿಕ್ಷಕರ ಗಮನಕ್ಕೆ
- ಶಾಲೆಗಳಲ್ಲಿ/ ತರಗತಿ ವೇಳೆಯಲ್ಲಿ ಮಕ್ಕಳು ಮತ್ತು ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು.
- ಇಲಾಖಾ ಸುತ್ತೋಲೆಯಲ್ಲಿ ತಿಳಿಸಿರುವಂತೆ SOP, ಸಾಮಾಜಿಕ ಅಂತರ ಹಾಗೂ ಪ್ರತಿ ಡೆಸ್ಕ್ ಇಬ್ಬರು ಮಕ್ಕಳಂತೆ ಕೂಡಿಸುವುದು.
- ಪ್ರತಿದಿನ ಹಾಜರಾಗುವ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನರ್ ಬಳಸಿ ದೇಹದ ಉಷ್ಣತೆಯನ್ನು ಪರಿಶೀಲಿಸಿ ದಾಖಲೆ
ನಿರ್ವಹಿಸುವುದು. - ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್
ಮತ್ತು ಕೈ ತೊಳೆಯುವ ನೀರಿನ ವ್ಯವಸ್ಥೆ ಮಾಡುವುದು. - ಪ್ರತಿ ಶನಿವಾರ ತರಗತಿ ಕೊಠಡಿಗಳನ್ನು ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಸ್ವಚ್ಛಗೊಳಿಸುವುದು.
- ಇಲಾಖಾ ಸುತ್ತೋಲೆಯಲ್ಲಿ ತಿಳಿಸಿರುವಂತೆ ವಿದ್ಯಾರ್ಥಿಗಳ ಗುಂಪುಗಳನ್ನು ಮಾಡಿಕೊಂಡು ಬೋಧನೆ ಮಾಡುವುದು.
- ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ ಮಾಡಿ ದಾಖಲೆ ನಿರ್ವಹಿಸುವುದು.
ಮೇಲ್ಕಂಡ ಅಂಶಗಳ ಬಗ್ಗೆ ಪರಿಶೀಲನೆ ಮಾಡಲು ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು, ನ್ಯಾಯಾಂಗ ಇಲಾಖಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ಭೇಟಿ ಮಾಡುತ್ತಿದ್ದು ಯಾವುದೇ ಶಾಲೆಯಲ್ಲಿ ಈ ಸಂಬಂಧ ನಿಯಮ ಉಲ್ಲಂಘನೆ ಆಗುವುದು ಕಂಡುಬಂದಲ್ಲಿ ಸದರಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ವಿಷಯ ಶಿಕ್ಷಕರನ್ನು ಕೂಡಲೇ ಅಮಾನತ್ತು / ಶಿಸ್ತು ಕ್ರಮ ಕೈಗೊಳ್ಳಲು ಮಾನ್ಯ ಉಪನಿರ್ದೇಶಕರು (ಆಡಳಿತ ) ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕಬಳ್ಳಾಪುರ ರವರಿಂದ ನಿರ್ದೇಶನ ವಾಗಿರುತ್ತದೆ. ಆದ್ದರಿಂದ ಯಾವುದೇ ಅವ್ಯವಸ್ಥೆಗಳು ಆಗದಂತೆ ಮುಖ್ಯ ಶಿಕ್ಷಕರು ಕ್ರಮ ವಹಿಸಲು ಸೂಚಿಸಿದೆ.
ಈ ಸಂಬಂಧ ಸಂಬಂಧಿಸಿದ ಕ್ಷೇತ್ರ ಸಿಬ್ಬಂದಿಯ ವರು(Eco/BRP/CRP) ಸೂಕ್ತ ರೀತಿಯಲ್ಲಿ ಮೇಲುಸ್ತುವಾರಿ ಮಾಡಲು ತಿಳಿಸಿದೆ.
ಕ್ಷೇತ್ರಶಿಕ್ಷಣಾಧಿಕಾರಿಗಳು ಗೌರಿಬಿದನೂರು