ಬೆಳ್ಳಿಗಟ್ಟಿಯಲ್ಲಿ ಗಟ್ಟಿಯಾಯಿತು ನಾಗರಾಜ ಛಬ್ಬಿ ಅವರೊಂದಿಗೆ ಗ್ರಾಮಸ್ಥರ ಮಾತುಕತೆ – ಕಲಘಟಗಿ ಕ್ಷೇತ್ರದಲ್ಲಿ ನಾಗರಾಜ ಛಬ್ಬಿ ಮತ್ತು ಟೀಮ್ ಮುಂದುವರೆದ ಸಂಚಾರದ ಅಬ್ಬರ ಹೋದಲ್ಲೆಲ್ಲ ಕಂಡು ಬರುತ್ತಿದ್ದ ಬೆಂಬಲ

Suddi Sante Desk
ಬೆಳ್ಳಿಗಟ್ಟಿಯಲ್ಲಿ ಗಟ್ಟಿಯಾಯಿತು ನಾಗರಾಜ ಛಬ್ಬಿ ಅವರೊಂದಿಗೆ ಗ್ರಾಮಸ್ಥರ ಮಾತುಕತೆ – ಕಲಘಟಗಿ ಕ್ಷೇತ್ರದಲ್ಲಿ  ನಾಗರಾಜ ಛಬ್ಬಿ ಮತ್ತು ಟೀಮ್ ಮುಂದುವರೆದ ಸಂಚಾರದ ಅಬ್ಬರ ಹೋದಲ್ಲೆಲ್ಲ ಕಂಡು ಬರುತ್ತಿದ್ದ ಬೆಂಬಲ

ಕಲಘಟಗಿ

ಇನ್ನೇನು ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಇತ್ತ ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷದ ಯುವ ಮುಖಂಡ ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಕಲಘಟಗಿ ಕ್ಷೇತ್ರದಲ್ಲಿಯೇ ಠಿಕಾಣೆ ಹೂಡಿದ್ದು ಬೆಂಬಲಿಗರೊಂದಿಗೆ ಬಿಡುವಿ ಲ್ಲದೇ ತಿರುಗಾಡುತ್ತಿದ್ದಾರೆ.ಹೌದು ಕಳೆದ ಒಂದೂವರೆ ವರ್ಷದಿಂದ ಪ್ರತಿ ದಿನವೂ ಕ್ಷೇತ್ರದ ಒಂದಲ್ಲ ಒಂದು ಊರಿಗೆ ಹೋಗುತ್ತಾ ಸಭೆ ಸಮಾರಂಭ ಮಾಡುತ್ತಾ ಅಲ್ಲಿನ ಗ್ರಾಮಸ್ಥರೊಂ ದಿಗೆ ಸಭೆಯನ್ನು ಮಾಡಿ ಸಮಸ್ಯೆಗಳನ್ನು ಆಲಿಸುತ್ತಾ ಚರ್ಚೆಯನ್ನು ಮಾಡಿ ಸ್ಪಂದಿಸುತ್ತಿ ದ್ದಾರೆ.

ಇನ್ನೂ ಇದರೊಂದಿಗೆ ಪ್ರತಿ ಮನೆ ಮನೆಗೂ ತೆರಳಿ ಕುಕ್ಕರ್ ಗಳನ್ನು ವಿತರಣೆ ಮಾಡುತ್ತಿದ್ದು ಈ ಒಂದು ಕಾರ್ಯಕ್ರಮ ಮುಂದುವರೆದಿದ್ದು ಬೆಳ್ಳಿಗಟ್ಟಿ ಗ್ರಾಮದಲ್ಲಿ ಬಹಿರಂಗ ಕಾರ್ಯಕ್ರಮ ದೊಂದಿಗೆ ಕುಕ್ಕರ್ ವಿತರಣೆ ನಡೆಯಿತು. ಗ್ರಾಮ ದಲ್ಲಿ ಕೆಲ ಸಮಯ ಗ್ರಾಮಸ್ಥರೊಂದಿಗೆ ಸಭೆ ಯನ್ನು ಮಾಡಿದ ನಾಗರಾಜ ಛಬ್ಬಿ ಅವರು ಅವರೊಂದಿಗೆ ಮಾತಕತೆಯನ್ನು ಮಾಡಿದರು

ಬರುವ ದಿನಗಳಲ್ಲಿ ಯಾವುದೇ ಸಮಸ್ಯೆ ಇರಲಿ ಯಾವುದೇ ಅಭಿವೃದ್ದಿ ವಿಚಾರದಲ್ಲಿ ನಿಮ್ಮೊಂದಿಗೆ  ಗಟ್ಟಿಯಾಗಿ ಇರೋದಾಗಿ ಹೇಳಿದರು ಇದಕ್ಕೂ ಗ್ರಾಮಸ್ಥರು ಕೂಡಾ ಸ್ಪಂದಿಸಿ ಭರವಸೆಯನ್ನು ನೀಡಿದರು.ಅಲ್ಲದೇ ನಾಗರಾಜ ಛಬ್ಬಿಗೆ ಈ ಬಾರಿ ನಮ್ಮ ನಾಯಕರು ಎಂಬ ಭರವಸೆಯ ಮಾತುಗ ಳನ್ನು ಹೇಳಿ ಆತ್ಮಸ್ಥೈರ್ಯ್ಯವನ್ನು ತುಂಬಿದರು.ಈ ಒಂದು ಸಮಯದಲ್ಲಿ ಚನ್ನಬಸು ಗುರಕ್ಕನವರ, ಗಿರೀಶ್ ಪೂಜಾರ,ಬಸವರಾಜ ಅಮರಗೋಳ ಕಿರಣ ಪಾಟೀಲ,ಮದನ ಕುಲಕರ್ಣಿ,ಉಳವಪ್ಪ ಬೆಟಗೇರಿ,ಮಂಜುನಾಥ ಬಡಿಗೇರ,ನಿಂಗಪ್ಪ ಲಕ್ಕಪ್ಪನವರ,ವೀರುಪಾಕ್ಷಿ ಕಂಚಿನೋಳಿ, ಗುರುನಾಥ ದಾನ್ವೇನವರ,ಸೇರಿದಂತೆ ಹಲವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಥ್ ನೀಡಿದರು.

ಸುದ್ದಿ ಸಂತೆ ನ್ಯೂಸ್  ಕಲಘಟಗಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.