ವಿಜಯಪುರ –
ಕಂಬಳಿ ಮೇಲೆ ಅಕ್ಕಿಯಿಂದ ಮಂಡಲ ಹಾಕಿ, ಕೊರಳಲ್ಲಿ ಮೆಣಸಿನಕಾಯಿ,ಲಿಂಬೆಕಾಯಿ ಕಟ್ಟಿಕೊಂಡು ವಿಚಿತ್ರ ರೀತಿಯಲ್ಲಿ ವ್ಯಕ್ಯಿಯೋರ್ವ ಆತ್ಮಹತ್ಯೆ ಹೌದು ಇಂತಹ ದೊಂದು ವಿಚಿತ್ರ ವಾದ ಘಟನೆಯೊಂದು ವಿಜಯಪುರ ದಲ್ಲಿ ನಡೆದಿದೆ.
ಸಾಮಾನ್ಯವಾಗಿ ನಾವು ಹಾಗೇ ಹೀಗೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕೇಳಿದ್ದೇವೆ ನೋಡಿದ್ದೇವೆ ಆದರೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಹೊರವಲಯದ ಜಮೀ ನೊಂದರಲ್ಲಿ ವಿಚಿತ್ರ ಆತ್ಮಹತ್ಯೆ ನಡೆದಿದೆ.
ಕಂಬಳಿ ಮೇಲೆ ಅಕ್ಕಿಯಿಂದ ಮಂಡಲ ಹಾಕಿ, ಕೊರಳಲ್ಲಿ ಮೆಣಸಿಕನಾಯಿ ಹಾಗೂ ಲಿಂಬೆ ಕಾಯಿ ಕಟ್ಟಿಕೊಂಡು ವಿಚಿತ್ರ ರೀತಿಯಲ್ಲಿ ವ್ಯಕ್ಯಿ ಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಡಿವೆಪ್ಪ (43) ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾರೆ.
ಇತ ಪಿತ್ರಾರ್ಜಿತವಾಗಿ ಬಂದಿದ್ದ 35 ಎಕರೆಗೂ ಆಧಿಕ ಜಮೀನು ಮಾರಾಟ ಮಾಡಿದ್ದ ಮಧ್ಯ ಸೇವನೆ ಹಾಗೂ ಇತರೆ ಚಟಗಳ ದಾಸನಾಗಿದ್ದ ಅಡಿವೆಪ್ಪ ಆಸ್ತಿ ಮಾರಾಟ ಮಾಡಿದ ಬಳಿಕ ಮಾನಸಿಕವಾಗಿ ಆಘಾತಗೊಂಡಿದ್ದನಂತೆ.
ಈ ಹಿನ್ನಲೆ ತನ್ನ ಎರಡೂ ಕೈಗಳಲ್ಲಿ ಕೆಂಪು ಬಟ್ಟೆಯಲ್ಲಿ ನಿಂಬೆ ಹಣ್ಣು ಕಟ್ಟಿಕೊಂಡು ಇಂದು ಮುಂಜಾನೆ ಬೇವಿನ ಮರಕ್ಕೆ ನೇಣು ಹಾಕಿ ಕೊಂಡು ವಿಚಿತ್ರವಾಗಿ ಆತ್ಮಹತ್ಯೆ ಮಾಡಿಕೊಂಡಿ ದ್ದಾನೆ. ಈ ಕುರಿತು ಝಳಕಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ
ಸುದ್ದಿ ಸಂತೆ ನ್ಯೂಸ್ ವಿಜಯಪುರ…..