This is the title of the web page
This is the title of the web page

Live Stream

[ytplayer id=’1198′]

February 2025
T F S S M T W
 12345
6789101112
13141516171819
20212223242526
2728  

| Latest Version 8.0.1 |

ವಿಜಯಪುರ

ಬೇಸಿಗೆ ರಜೆ ಮೂಡ್ ನಲ್ಲಿದ್ದ ಮೂವರು ಮಕ್ಕಳು ಸಾವು – ಒಂಟೆ ಹುಡುಕುತ್ತಾ ಹೊರಟ ಮಕ್ಕಳು ಶವವಾಗಿ ಪತ್ತೆ…..

ಬೇಸಿಗೆ ರಜೆ ಮೂಡ್ ನಲ್ಲಿದ್ದ ಮೂವರು ಮಕ್ಕಳು ಸಾವು – ಒಂಟೆ ಹುಡುಕುತ್ತಾ ಹೊರಟ ಮಕ್ಕಳು ಶವವಾಗಿ ಪತ್ತೆ…..
WhatsApp Group Join Now
Telegram Group Join Now

ವಿಜಯಪುರ –

ನಾಪತ್ತೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆ ಯಾದ ಘಟನೆ ವಿಜಯಪುರ ದಲ್ಲಿ ನಡೆದಿದೆ ಹೌದು ಒಂಟೆಗಳನ್ನು ಹುಡುಕುತ್ತಾ ಹೊರಟಿದ್ದ ಮೂವರು ಮಕ್ಕಳು ಯುಜಿಡಿ ತ್ಯಾಜ್ಯ ನೀರಿನ ಘಟಕದಲ್ಲಿ ಬಿದ್ದು ಶವವಾಗಿ ಪತ್ತೆಯಾದ ಹೃದಯವಿದ್ರಾವಕ ಘಟನೆ ವಿಜಯಪುರದಲ್ಲಿ ಸಂಭವಸಿದೆ.

ಮಕ್ಕಳನ್ನು ೯ ವರ್ಷದ ಅನುಷಾ ದಹಿಂಡೆ, ೭ ವರ್ಷದ ವಿಜಯ ದಹಿಂಡೆ ಹಾಗೂ ೭ ವರ್ಷದ ಮಿಹಿರ್ ಎಂದು ಗುರುತಿಸಲಾಗಿದೆ. ಗದಗ ಮೂಲದ ಅನುಷಾ, ವಿಜಯ ಬೇಸಿಗೆ ರಜೆಗೆಂದು ವಿಜಯಪುರದ ತನ್ನ ಮಾವನ ಮನೆಗೆ ಬಂದಿದ್ದರು.  ಚಾಬುಕಸವಾರ್ ದರ್ಗಾ ಬಳಿ ಮನೆ ಮುಂದೆ ಒಂಟೆಗಳು ಬಂದಿದ್ದವು. ಈ ವೇಳೆ ಮೂವರು ಮಕ್ಕಳು ಒಂಟೆ ಸವಾರಿ ಮಾಡಿದ್ದಾರೆ.

ಬಳಿಕ ತೆರಳಿದ ಒಂಟೆಗಳನ್ನು ಹುಡುಕುತ್ತಾ ಮೂವರು ಮಕ್ಕಳು ಮನೆಯಿಂದ ಹೊರಟಿದ್ದಾರೆ.ಮಕ್ಕಳು ಆಟ ವಾಡುತ್ತಿರಬಹುದು ಎಂದು ಮನೆಯವರು ಭಾವಿಸಿ ದ್ದರು.ಆದರೆ ರಾತ್ರಿಯಾದರೂ ಮಕ್ಕಳ ಸುಳಿವಿಲ್ಲದಿ ದ್ದಾಗ ಗಾಬರಿಯಾದ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

ಸಿಸಿಟಿವಿ ಪರಿಶೀಲಿಸಿದಾಗ ಮಕ್ಕಳು ರಸ್ತೆಯಲ್ಲಿ ಹೋಗುತ್ತಿರುವ ದುಶ್ಯಗಳು ಕಂಡುಬಂದಿವೆ.
ಪೊಲೀಸರು ಹುಡುಕಾಟ ನಡೆಸಿದಾಗ ಮೂವರು ಮಕ್ಕಳು ಯುಜಿಡಿ ತ್ಯಾಜ್ಯದ ನೀರಿನ ಸಂಸ್ಕರಣಾ ಘಟದ ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಘಟಕದ ಬಳಿ ಸಾರ್ವಜನಿಕರಿಗೆ ಪ್ರವೇಶವಿಲ್ಲದಿದ್ದರೂ ಮಕ್ಕಳು ಈ ಸ್ಥಳಕ್ಕೆ ಬಂದಿದ್ದಾರೂ ಹೇಗೆ ಘಟಕದ ಅಧಿಕಾರಿಗಳ ಬೇಜವಾಬ್ದಾರಿಯೇ ಮಕ್ಕಳ ಸಾವಿಗೆ ಕಾರಣ ಎಂದು ಪೋಷಕರು ಯುಜಿಡಿ ಘಟದ ಬಳಿ ಪ್ರತಿಭಟನೆ ಸಹ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಸುದ್ದಿ ಸಂತೆ ನ್ಯೂಸ್ ವಿಜಯಪುರ…..


Google News

 

 

WhatsApp Group Join Now
Telegram Group Join Now
Suddi Sante Desk