ಧ್ವಜಾರೋಹಣಕ್ಕೆ ಚಕ್ಕರ್ ಹೊಡೆದ ಅಧಿಕಾರಿ ಮೇಲೆ ಏನು ಕ್ರಮ…..? – ದೇಶಾಭಿಮಾನಕ್ಕಿಂತ ಪೈಲ್ ಗಳೇ ಹೆಚ್ಚು ಎನ್ನುತ್ತಿರುವ ವಿಠ್ಠಲ ತುಬಾಕೆಯವರ ನಡೆಗೆ ಆಕ್ರೋಶ…..

Suddi Sante Desk
ಧ್ವಜಾರೋಹಣಕ್ಕೆ ಚಕ್ಕರ್ ಹೊಡೆದ ಅಧಿಕಾರಿ ಮೇಲೆ ಏನು ಕ್ರಮ…..? – ದೇಶಾಭಿಮಾನಕ್ಕಿಂತ ಪೈಲ್ ಗಳೇ ಹೆಚ್ಚು ಎನ್ನುತ್ತಿರುವ ವಿಠ್ಠಲ ತುಬಾಕೆಯವರ ನಡೆಗೆ ಆಕ್ರೋಶ…..

ಹುಬ್ಬಳ್ಳಿ

ಧ್ವಜಾರೋಹಣಕ್ಕೆ ಚಕ್ಕರ್ ಹೊಡೆದ ಅಧಿಕಾರಿ ಮೇಲೆ ಏನು ಕ್ರಮ – ದೇಶಾಭಿಮಾನಕ್ಕಿಂತ ಪೈಲ್ ಗಳೇ ಹೆಚ್ಚು ಎನ್ನುತ್ತಿರುವ ವಿಠ್ಠಲ ತುಬಾಕೆಯವರ ನಡೆಗೆ ಆಕ್ರೋಶ

ಜನೆವರಿ 26 ರ ಗಣರಾಜ್ಯೋತ್ಸವ ದಿನ ಇದೊಂದು ರಾಷ್ಟ್ರೀಯ ಹಬ್ಬವಾಗಿದ್ದು ಈ ಒಂದು ದಿನದಂದು ಸಾರ್ವಜನಿಕರು ಸೇರಿದಂತೆ ಸರ್ಕಾರಿ ಅಧಿಕಾರಿಗಳು ನೌಕರರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧ್ವಜಾರೋಹಣ ಮಾಡುವುದು ಕಡ್ಡಾಯ ವಾಗಿದೆ. ಈ ಒಂದು ವಿಚಾರ ಸಾಮಾನ್ಯವಾಗಿದ್ದರು ಇತ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕೆಲ ಅಧಿಕಾರಿಗಳಿಗೆ ಗಣರಾಜ್ಯೋತ್ಸ ದಿನಾಚರಣೆ ಅಂದರೆ ಅಲರ್ಜಿ ಎಂಬಂತೆ ಕಾಣುತ್ತಿದೆ ಕಡ್ಡಾಯವಾಗಿ ಈ ಒಂದು ಕಾರ್ಯಕ್ರಮದಲ್ಲಿ ಹಾಜರಿರಬೇಕು ಪಾಲ್ಗೊಳ್ಳ ಬೇಕು ಎಂದು ಗೊತ್ತಿದ್ದರೂ ಕೂಡಾ ಚಕ್ಕರ್ ಹೊಡೆದು ಬೇರೆ ಕೆಲಸಕ್ಕೆ ಹಾಜರ್ ಆಗಿದ್ದಾರೆ

ಹೌದು ಪಾಲಿಕೆಯ ಉತ್ತರ ವಿಭಾಗದ ಕಾರ್ಯನಿರ್ವಾ ಹಕ ಅಭಿಯಂತರ ವಿಠ್ಠಲ ತುಬಾಕೆಯವರು ಧ್ವಜಾ ರೋಹಣಕ್ಕೆ ಹೊಗದೆ ಅತ್ತ ಪೈಲ್ ಗಳನ್ನು ಹಿಡಿದು ಕೊಂಡು ನಿರ್ಗಮಿತ ಪಾಲಿಕೆಯ ಆಯುಕ್ತರ ನಿವಾಸ ದಲ್ಲಿ ಹಾಜರ್ ಆಗಿದ್ದಾರೆ.ಕೆಲವೊಂದಿಷ್ಟು ಪೈಲ್ ಗಳನ್ನು ತಗೆದುಕೊಂಡು ಹೋಗಿ ವರ್ಗಾವಣೆಗೊಂಡಿರುವ ಆಯುಕ್ತರ ಮನೆಗೆ ಹಾಜರ್ ಆಗಿ ದೇಶಾಭಿಮಾನಕ್ಕಿಂತ ಪೈಲ್ ಗಳೇ ಮಹತ್ವ ಎಂಬಂತೆ ಸಹಿ ಮಾಡಿಸಿಕೊಂಡು ಬಂದಿದ್ದಾರೆ.

ಧ್ವಜಾರೋಹಣಕ್ಕೆ ಚಕ್ಕರ್ ಹೊಡೆದರು ಕೂಡಾ ಈವರೆಗೆ ಇವರನ್ನು ಉಪ ಆಯುಕ್ತರಾಗಲಿ, ಆಯುಕ್ತ ರಾಗಲಿ,ಮೇಯರ್ ಆಗಲಿ ಉಪ ಮೇಯರ್ ಆಗಲಿ ಯಾರು ಕೇಳಿಲ್ಲ ಧ್ವಜಾರೋಹಣಕ್ಕೆ ಯಾಕೇ ಬಂದಿಲ್ಲ ತಪ್ಪಿಸಿದ್ದು ಯಾಕೇ ಎಂದು ಪ್ರಶ್ನೆ ಮಾಡಿಲ್ಲ ಇದನ್ನು ನೊಡಿದರೆ ಪಾಲಿಕೆಯಲ್ಲಿ ಏನು ಮಾಡಿದರು ನಡೆ ಯುತ್ತದೆ ಎಂಬೊದು ಈ ಮೂಲಕ ಕಂಡು ಬರುತ್ತಿದ್ದು

ಪ್ರಶ್ನೆ ಮಾಡಬೇಕಾದ ಆಯುಕ್ತರೇ ಮೇಯರ್ ಅವರು ಮೌನವಾಗಿದ್ದು ಇತ್ತ ಈ ಒಂದು ವಿಚಾರಕ್ಕೆ ಸಾರ್ವಜ ನಿಕರು ಪಾಲಿಕೆಯ ಅಧಿಕಾರಿಗಳು,ಸಿಬ್ಬಂದಿಗಳು ಆಕ್ರೋಶ ಅಸಮಾಧನಗೊಂಡಿದ್ದಾರೆ ಇನ್ನಾದರೂ ಪಾಲಿಕೆಗೆ ಈಗಷ್ಟೇ ಹೊಸದಾಗಿ ಬಂದಿರುವ ಆಯುಕ್ತರು ಈ ಒಂದು ವಿಚಾರವನ್ನು ಗಂಭೀರವಾಗಿ ತಗೆದುಕೊಂಡು ವಿಠ್ಠಲ ತುಬಾಕೆಯವರನ್ನು ಪ್ರಶ್ನೆ ಮಾಡ್ತಾರಾ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.