ನವೆಂಬರ್ 7 ರ ಸಭೆಯಲ್ಲಿ ಚರ್ಚಿ ಸುವ ಪ್ರಮುಖ ವಿಷಯಗಳು ಯಾವುವು ಗೊತ್ತಾ – ಹೊರಬಿತ್ತು ಚರ್ಚಾ ವಿಷಯಗಳ ಪಟ್ಟಿ…..

Suddi Sante Desk

ಬೆಂಗಳೂರು –

ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯದ ಶಿಕ್ಷಕರ ಸಮಸ್ಯೆ ಗಳ ಕುರಿತು ಚರ್ಚೆ ಮಾಡಲು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನವೆಂಬರ್ 7 ರಂದು ಮಹತ್ವದ ಸಭೆಯನ್ನು ಕರೆಯಲಾಗಿದೆ. ಈಗಾಗಲೇ ಈ ಒಂದು ಸಭೆ ಗೆ ರಾಜ್ಯದ ಮೂಲೆ ಮೂಲೆಗಳಿಂದ ಶಿಕ್ಷಕರು ಪಾಲ್ಗೊಳ್ಳಲು ಸಿದ್ದತೆ ನಡೆಸಿದ್ದಾರೆ.ಇವೆಲ್ಲದರ ‌ನಡುವೆ ಈ ಒಂದು ಸಭೆಯಲ್ಲಿ 8 ಅಂಶಗಳನ್ನು ಚರ್ಚೆ ಮಾಡಲು ತೀರ್ಮಾನಕ್ಕೆ ಬರಲಾಗಿದೆ.

ಈ ಎಲ್ಲಾ ಅಂಶಗಳನ್ನು ಈ ಒಂದು ಸಭೆಯನ್ನು ಚರ್ಚೆ ಮಾಡಿ ಒಂದು ಅಂತಿಮ ನಿರ್ಧಾರಕ್ಕೆ ಬಂದು ನವೆಂಬರ್ 8 ರಂದು ಶಿಕ್ಷಣ ಸಚಿವರ ಅಧ್ಯಕ್ಷತೆ ಯಲ್ಲಿ ನಡೆಯಲಿರುವ ಸಭೆಯಲ್ಲಿ ಪ್ರಸ್ತಾಪ ಮಾಡಿ ಮುಂದಿನ ನಿರ್ಧಾರವು ಆ ಒಂದು ಸಭೆಯಲ್ಲಿ ಘೋಷಣೆ ಯಾಗಲಿದೆ‌.ಒಟ್ಟಾರೆ ಏನೇ ಆಗಲಿ ಈ ಒಂದು ಸಭೆಯಿಂದಾದರೂ ನಾಡಿನ ಶಿಕ್ಷಕ ಬಂಧುಗಳ ಜ್ವಲಂತ ಸಮಸ್ಯೆಗಳು ಪರಿಹಾರ ಆಗಿ ಸಮಸ್ಯೆ ಗಳಲ್ಲಿ ಸಿಕ್ಕಿರುವ ಶಿಕ್ಷಕರಿಗೆ ನೆಮ್ಮದಿ ಸಿಗಲೆಂಬುದೆ ನಮ್ಮ ಆಶಯ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.