ಹೋಗುತ್ತಿದ್ದ ಟ್ರೇನ್ ನಿಂದ ಬಿದ್ದ ಮನೋಜ್ – ಮೂರು ಘಂಟೆಗಳ ನಂತರ ಆಗಿದ್ದೇನು…….

Suddi Sante Desk

ಹುಬ್ಬಳ್ಳಿ –

ಹೋಗುತ್ತಿದ್ದ ರೇಲ್ವೆಯಿಂದ ಯುವಕನೊಬ್ಬ ಕೆಳಗೆ ಬಿದ್ದ ಘಟನೆ ಕುಂದಗೋಳ ಬಳಿ ನಡೆದಿದೆ. ವೇಗವಾಗಿ ಹೋಗುತ್ತಿದ್ದ ಟ್ರೇನ್ ನಿಂದ ಯುವಕನೊಬ್ಬ ಕೆಳಗೆ ಬಿದ್ದಿದ್ದಾನೆ.

ಉತ್ತರ ಪ್ರದೇಶದ ಮನೋಜ್ ಎಂಬುವನೇ ಕೆಳಗಡೆ ಬಿದ್ದ ಯುವಕನಾಗಿದ್ದಾನೆ‌. ಅದೃಷ್ಟವಶಾತ್ ಬದುಕುಳಿದಿದ್ದು ಒಂದು ಕಾಲಿನ ಎಲುಬು ಸಂಪೂರ್ಣವಾಗಿ ಮುರಿದಿದೆ.

ತೀವ್ರವಾಗಿ ಗಾಯಗೊಂಡು ಹೊಲದಲ್ಲಿ ಬಿದ್ದಿದ್ದನು. ತೀವ್ರವಾದ ರಕ್ತಸ್ರಾವದಿಂದ ಬಿದ್ದಿದ್ದು ಮೂರು ಘಂಟೆಗಳ ನಂತರ ಇವನನ್ನು ನೋಡಿದ ಸಾರ್ವಜನಿಕರು 108 ಗೆ ಮಾಹಿತಿ ನೀಡಿದ್ದಾರೆ.

ಪೊನ್ ಕರೆ ಬರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ 108 ಸಿಬ್ಬಂದಿ ಗಳಾದ ಪರಶುರಾಮ ಚಂದಾವರಿ ಮತ್ತು ಶಿವಾನಂದ ಬೆಳವಂಕಿ ಹೊಲದಲ್ಲಿ ಬಿದ್ದಿದ್ದ ಮನೋಜ ಪ್ರತಾಪ್ ನನ್ನು ಹುಡುಕಾಡಿ ಕೊನೆಗೂ ಪತ್ತೆ ಹಚ್ಚಿದರು

ಪ್ರಥಮ ಚಿಕಿತ್ಸೆಯನ್ನು ನೀಡಿ ಸಧ್ಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಉತ್ತರ ಪ್ರದೇಶದ ಮೂಲದವನಾಗಿರುವ ಮನೋಜನ ಒಂದು ಕಾಲಿನ ಎಲುಬು ಮುರಿದಿದೆ

ಹೋಗುತ್ತಿದ್ದ ಟ್ರೇನ್ ನಿಂದ ಹೇಗೆ ಯಾತಕ್ಕಾಗಿ ಬಿದ್ದ ಎಂಬ ಕುರಿತಂತೆ ರೇಲ್ವೆ ಪೊಲೀಸರು ಮಾಹಿತಿ ಯನ್ನು ಪಡೆದುಕೊಳ್ಳುತ್ತಿದ್ದು ಇನ್ನೂ 108 ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಮನೋಜ್ ಬದುಕುಳಿದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾನೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.