ಮುಖ್ಯೋಪಾಧ್ಯಾಯನ ಚಳಿ ಬಿಡಿಸಿದ ಸಾರ್ವಜನಿಕರು – ಏನಿದು ಆರೋಪ – ಸಿಡಿದೆದ್ದ ಸಾರ್ವಜನಿಕರು…..

Suddi Sante Desk

ಮಂಡ್ಯ –

ಮಂಡ್ಯದಲ್ಲೊಬ್ಬ ಕಾಮುಕ ಮುಖ್ಯ ಶಿಕ್ಷಕನ ವಿರುದ್ಧ ಸಾರ್ವಜನಿಕರು ಸಿಡಿದೆದ್ದಿದ್ದಾರೆ.ಹೌದು ವಿದ್ಯಾರ್ಥಿನಿಯರ ಜೊತೆ ಮುಖ್ಯ ಶಿಕ್ಷಕ ಅಶ್ಲೀಲ ಮಾತುಗಳನ್ನು ಮಾತನಾಡು ತ್ತಾನಂತೆ.ಈ ಒಂದು ವಿಚಾರ ತಿಳಿಯುತ್ತಿದ್ದಂತೆ ಸಾರ್ವಜ ನಿಕರು ಸಿಡಿದೆದ್ದಿದ್ದಾರೆ

ಹೌದು ಪಠ್ಯದ ಬದಲು ಲವ್, ಅಫೇರ್ಸ್‌ಗಳ ಬಗ್ಗೆ ಕ್ಲಾಸ್.? ಮಾಡತಾರಂತೆ.ಹಿಟ್ಟನ ಹಳ್ಳಿಕೊಪ್ಪಲು ಗ್ರಾಮದ ಅನುದಾ ನಿತ ಪ್ರೌಢ ಶಾಲೆ ಮುಖ್ಯ ಶಿಕ್ಷಕನ ವಿರುದ್ಧ ಅಸಭ್ಯ ವರ್ತನೆ ದೂರು ಕೇಳಿ ಬಂದಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಿಟ್ಟಿನಹಳ್ಳಿಕೊಪ್ಪಲು ಗ್ರಾಮದಲ್ಲಿನ ವಿವೇಕಾನಂದ ಅನುದಾನಿತ ಪ್ರೌಢ ಶಾಲೆ ಮುಖ್ಯ ಶಿಕ್ಷಕನ ವಿರುದ್ಧ ಅಸಭ್ಯವ ವರ್ತನೆ ದೂರಿನ ಆರೋಪ ಕೇಳಿ ಬಂದಿದೆ.

ಈ ವಿಚಾರ ಕೇಳಿ ಬರುತ್ತಿದ್ದಂತೆ ಸಾರ್ವಜನಿಕರು ಪೋಷಕರು ಶಾಲೆಗೆ ಆಗಮಿಸಿ ಮುಖ್ಯ ಶಿಕ್ಷಕ ನನ್ನು ತರಾಟೆಗೆ ತೆಗೆದುಕೊಂಡರು

ಮುಖ್ಯ ಶಿಕ್ಷಕ ಬೋರಯ್ಯ ವಿರುದ್ಧ ವಿಧ್ಯಾರ್ಥಿನಿಯರ ಆರೋಪವನ್ನು ಮಾಡಿದ್ದಾರೆ.ಗ್ರಾಮ ಪಂಚಾಯತ ಪಿಡಿಓ ಬಳಿ ಅಳಲು ತೋಡಿಕೊಂಡಿದ್ದಾರೆ ವಿದ್ಯಾರ್ಥಿಗಳು

ಪಾಠ ಮಾಡುವ ಬದಲು ಬರೀ ವೈಯಕ್ತಿಕ ವಿಷಯ ಮಾತನಾಡುತ್ತಾರಂತೆ.ಕ್ಲಾಸ್‌ನಲ್ಲಿ ಲವ್,ಅಫೇರ್ ಅಂತೆಲ್ಲಾ ಅಶ್ಲೀಲವಾಗಿ ಮಾತುನಾಡುತ್ತಾರೆಂದು ಆರೋಪವನ್ನು ಮಾಡಿದ್ದಾರೆ ಶಾಲಾ ವಿದ್ಯಾರ್ಥಿ ನಿಯರು

ಶಿಕ್ಷಕ ಬೋರಯ್ಯನಿಗೆ ಗ್ರಾಮಸ್ಥರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.ನಮ್ಮೂರಿನ ಶಾಲೆ ನಿನ್ನಿಂದ ಕೆಟ್ಟ ಹೆಸರು ಬಂತು ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ಒಂದು ವಿಚಾರದಿಂದ ಅಸಮಾಧಾನಗೊಂಡ ಸಾರ್ವಜ ನಿಕರು ತಕ್ಷಣ ಕ್ರಮ ತೆಗೆಕೊಳ್ಳುವಂತೆ ಆಗ್ರಹವನ್ನು ಮಾಡಿ ದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.