9 ತಿಂಗಳು ಕಾರಾಗೃಹದಲ್ಲಿದ್ದ ವಿನಯ ಕುಲಕರ್ಣಿ ಕಾರ್ಯಕ್ರಮ ದಲ್ಲಿ AICC ಅಧ್ಯಕ್ಷರು ಪಾಲ್ಗೊಂಡು ಸಮಾಜಕ್ಕೆ ‌ಏನು ಸಂದೇಶ‌ ಕೊಡಲು ಹೊರಟಿದ್ದಾರೆ ಬಿಜೆಪಿ‌ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಪ್ರಶ್ನೆ ಕಾಂಗ್ರೆಸ್ ಪಕ್ಷದ ನಾಯಕ ವಿರುದ್ಧ ವಾಗ್ದಾಳಿ ಶೀಘ್ರದಲ್ಲೇ ಅವರಿಬ್ಬರೂ ಬಿಜೆಪಿ ಬರಲಿದ್ದಾರೆ ಎಂದ ಸಂಜಯ ಪಾಟೀಲ್

Suddi Sante Desk
9 ತಿಂಗಳು ಕಾರಾಗೃಹದಲ್ಲಿದ್ದ ವಿನಯ ಕುಲಕರ್ಣಿ ಕಾರ್ಯಕ್ರಮ ದಲ್ಲಿ AICC  ಅಧ್ಯಕ್ಷರು ಪಾಲ್ಗೊಂಡು ಸಮಾಜಕ್ಕೆ ‌ಏನು ಸಂದೇಶ‌ ಕೊಡಲು ಹೊರಟಿದ್ದಾರೆ ಬಿಜೆಪಿ‌ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಪ್ರಶ್ನೆ ಕಾಂಗ್ರೆಸ್ ಪಕ್ಷದ ನಾಯಕ ವಿರುದ್ಧ ವಾಗ್ದಾಳಿ ಶೀಘ್ರದಲ್ಲೇ ಅವರಿಬ್ಬರೂ ಬಿಜೆಪಿ ಬರಲಿದ್ದಾರೆ ಎಂದ ಸಂಜಯ ಪಾಟೀಲ್

ಬೆಳಗಾವಿ

ಕೊಲೆ ಆರೋಪದ‌ ಮೇಲೆ ಹಿಂಡಲಗಾ ಕಾರಾ ಗೃಹದಲ್ಲಿ 9 ತಿಂಗಳು ಕಳೆದ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜನ್ಮ‌  ದಿನಾಚರಣೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸಿ ಸಮಾಜಕ್ಕೆ ‌ಏನು ಸಂದೇಶ‌ ಕೊಡಲು ಹೊರಟಿದ್ದಾರೆ ಎಂದು ಬೆಳಗಾವಿ ಬಿಜೆಪಿ‌ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಪ್ರಶ್ನಿಸಿದರು.ನಗರದ ಕನ್ನಡ‌ ಸಾಹಿತ್ಯ ‌ಭವನದಲ್ಲಿ‌  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ನಾಯಕ ವಿರುದ್ಧ ವಾಗ್ದಾಳಿ ನಡೆಸಿದರು

ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ‌ನೇತೃತ್ವದಲ್ಲಿ ಭಾರತ್‌ ಜೋಡೋ ಪಾದಯಾತ್ರೆ ಮಾಡುತ್ತಿ ದ್ದಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು‌. ಅದರ ಬಗ್ಗೆ ಚಕಾರ ಎತ್ತಯಲಿಲ್ಲ ಎಂದರು

ಕಿತ್ತೂರಿನಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಕೊಲೆ‌ ಆರೋಪ ಇರುವ ವ್ಯಕ್ತಿ ಅವರ ಜನ್ಮ‌ ದಿನಾಚರಣೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾ ರ್ಜುನ ‌ಖರ್ಗೆ ಆಗಮಿಸುತ್ತಿರುವುದು ದುರ್ದೈವದ ಸಂಗತಿ‌ ಎಂದರು.

ಹಿಂದೂ ಕಾರ್ಯಕರ್ತ,ಬಿಜೆಪಿ ಮುಖಂಡ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ 9 ತಿಂಗಳು ಜೈಲಿನಲ್ಲಿ ಇದ್ದ ವಿನಯ ಕುಲಕರ್ಣಿ ಅವರ ಜನ್ಮ‌‌ ದಿನಾಚರಣೆ ಮಾಡುತ್ತಿರುವುದು ಹಾಸ್ಯಾಸ್ದದ ಅಲ್ಲದೆ ಧಾರವಾಡಕ್ಕೆ ಸಮೀಪವಾಗುವ ಕಿತ್ತೂರಿ ನಲ್ಲಿ ಆಯೋಜನೆ ಮಾಡಿದ್ದಾರೆ.‌ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಭಾಶಯ ಕೋರಲು ಬರುತ್ತಿದ್ದಾರೆ.ಅವರ ಮೇಲೆ ಕ್ರಿಮಿನಲ್ ವ್ಯಕ್ತಿಯ ಜನ್ಮ ದಿನಾಚರಣೆಗೆ ಆಗಮಿಸುತ್ತಿರುವ ಕಾಂಗ್ರೆಸ್ ನಾಯಕರು ಆಗಮಿಸಿ‌ ಸಮಾಜಕ್ಕೆ ಏನು ಸಂದೇಶ‌ ಕೊಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು.

ಬೆಳಗಾವಿ ಬಿಜೆಪಿಯ ನಾಯಕರು ಕಾಂಗ್ರೆಸ್ ಬರಲಿದ್ದಾರೆ ಎಂದು ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಚನ್ನರಾಜ ಹಟ್ಟಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿಗೆ  ಬರುವ ಸುದ್ದಿ ಇದೆ ಎಂದು ಹೊಸ ಬಾಂಬ್ ಸಿಡಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.