ಮೇಯಲು ಹೋಗಿದ್ದ ಎತ್ತನ್ನು ಮೇಯ್ದ ಚಿರತೆ – ಆತಂಕದಲ್ಲಿ ಕಲಘಟಗಿಯ ರೈತರು ಎಲ್ಲಿದ್ದಾರೆ ಅರಣ್ಯಾಧಿಕಾರಿಗಳು…..

Suddi Sante Desk
ಮೇಯಲು ಹೋಗಿದ್ದ ಎತ್ತನ್ನು ಮೇಯ್ದ ಚಿರತೆ – ಆತಂಕದಲ್ಲಿ ಕಲಘಟಗಿಯ ರೈತರು ಎಲ್ಲಿದ್ದಾರೆ ಅರಣ್ಯಾಧಿಕಾರಿಗಳು…..

ಕಲಘಟಗಿ

ಮೇಯಲು ಹೋಗಿದ್ದ ಎತ್ತುಗಳ ಮೇಲೆ ಚಿರತೆ ಗಳ ಹಿಂಡೊಂದು ದಾಳಿ ಮಾಡಿದ ಘಟನೆ ಕಲಘಟಗಿ ತಾಲೂಕಿನ ಹಟಕಿನಾಳ ಗ್ರಾಮದಲ್ಲಿ ನಡೆದಿದೆ.ಮನೆಯಿಂದ ಎತ್ತು ಮೇಯಲು ಹೋಗಿ ವಾಪಸ್ಸು ಬಾರದೇ ಇದ್ದಾಗ ಮಾಲಿಕ ತನ್ನ ಎತ್ತನ್ನು ಹುಡುಕಿಕೊಂಡು ಹೋದಾಗ ಎತ್ತಿನ ಮೇಲೆ ಚಿರತೆ ಗಳು ದಾಳಿ ಮಾಡಿ ತಿನ್ನುವ ದ್ರಶ್ಯ ಕಂಡು ಗಾಬರಿ ಯಿಂದ ಓಡೋಡಿ ಮನೆಗೆ ಬಂದಿದ್ದಾನೆ.

ಅರಣ್ಯಾಧಿಕಾರಿಗಳಿ ಮಾಹಿತಿ ತಿಳಿಸಿದ್ದು ಸ್ಥಳಕ್ಕೆ ಬರುತ್ತಿದ್ದಂತೆ ಎತ್ತು ಸಾವಿಗೀಡಾಗಿತ್ತು. ಕಲಘಟ ಗಿಯ ಕಾಡಂಚಿನ ಜನ ಈ ಚಿರತೆಗಳ ಹಿಂಡು ನೋಡಿ ಭಯಭೀತರಾಗಿದ್ದಾರೆ.ಅಲ್ಲದೇ ಮಳೆ ಬೆಳೆ ಇಲ್ಲದೇ ಕಂಗಾಲಾಗಿರುವ ರೈತನ ಇಂತಹ ಪರಿಸ್ಥಿಯಲ್ಲಿ ಎತ್ತನ್ನು ಕಳೆದುಕೊಂಡು ಏನು ತಿಳಿಯಂದಂತಾಗಿದ್ದಾನೆ.ಇಂತಹ ಪ್ರಕರಣಗಳಲ್ಲಿ ಸರಕಾರ ಸಹಾಯಕ್ಕೆ ಬರಬೇಕಾಗಿದೆ.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.