ಮಕ್ಕಳು ತಿನ್ನುವ ಆಹಾರದಲ್ಲಿ ಹುಳುಗಳ ರಾಶಿ ರಾಶಿ ತಲೆ ಕೇಡಿಸಿಕೊಳ್ಳದ ಅಧಿಕಾರಿಗಳು

Suddi Sante Desk
ಮಕ್ಕಳು ತಿನ್ನುವ ಆಹಾರದಲ್ಲಿ ಹುಳುಗಳ ರಾಶಿ ರಾಶಿ ತಲೆ ಕೇಡಿಸಿಕೊಳ್ಳದ ಅಧಿಕಾರಿಗಳು

ಬೆಂಗಳೂರು

ಮಕ್ಕಳು ತಿನ್ನುವ ಆಹಾರ ಪದಾರ್ಥದಲ್ಲಿ ಹುಳುಗಳು ಕಾಣಿಸಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಬ್ ಮಂಗಳ ವೆಂಕಟೇಶ್ವರ ಶಾಲೆಯಲ್ಲಿ ಕಾಣಿಸಿಕೊಂಡಿದೆ.

 

ಇನ್ನು ಈ ಬಗ್ಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿಯನ್ನು ವೀಣಾ ಎಂಬವರನ್ನು ಪ್ರಶ್ನೆ ಮಾಡಿದರೆ ಉಡಾಫೆ ಉತ್ತರವನ್ನು ನೀಡುತ್ತಿದ್ದು ಅದಲ್ಲದೆ ಈ ಬಾರಿ ಅಡ್ಜಸ್ಟ್ ಮಾಡಿಕೊಳ್ಳುವಂತೆ ಶಾಲೆ ಸಿಬ್ಬಂದಿಗಳಿಗೆ ತಾಕಿತು ಮಾಡುತ್ತಿದ್ದಾರಂತೆ .

 

ಆನೇಕಲ್ ದ್ಯಂತ ಅಕ್ಷರ ದಾಸೋಹ ಶಾಲೆಗಳ ಪೈಕಿ 300ಕ್ಕೂ ಹೆಚ್ಚು ಒಳಗೊಂಡಿದ್ದು ಆನೇಕಲ್ ತಾಲೂಕಿನ ರಾಮಕೃಷ್ಣಾಪುರ ಗೋರ್ಡನ್ ಬಳಿ ಆಹಾರ ಪದಾರ್ಥಗಳನ್ನು ಶೇಖರಣೆ ಮಾಡಿದ್ದು ಅಲ್ಲಿಂದ ಎಲ್ಲಾ ಶಾಲೆಗಳಿಗೂ ರವಾನೆ ಮಾಡಲಾಗುತ್ತೆ ಅಂತೆ

 

ಇನ್ನೂ ಹುಳುಗಳು ಇರುವ ಆಹಾರ ಪದಾರ್ಥ ಗಳನ್ನು ಬದಲಿಸಿಕೊಡದೆ ನೀರಲ್ಲಿ ನೆನಸಿ ಒಣಗಿಸಿ ಉಪಯೋಗಿಸುವಂತೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ವೀಣಾ ಸೂಚನೆ ನೀಡಿದ್ದಾರಂತೆ ಇನ್ನೂ ಶಾಲೆಯಲ್ಲಿ ಆಹಾರ ಪದಾರ್ಥಗಳಲ್ಲಿ ಹುಳು ಇದೆ ಇಲಾಖೆಗೆ ಮೌಖಿಕ ವಾಗಿ ದೂರು ಸ್ಥಳಕ್ಕೆ ಭೇಟಿ ಕೊಡುವಂತೆ ಹೇಳಿದ್ರೆ ತುಂಬಾ ಬ್ಯುಸಿ ಇದ್ದೇನೆ ಅಂತ ಹೇಳಿ ಸಮಸ್ಯೆ ಇರುವ ಕಡೆ ಬಾರದೆ ಆಹಾರ ಪದಾರ್ಥಗಳೇ ಕೊಡದ ಶಾಲೆಗೆ ಭೇಟಿ ಕೊಟ್ಟು ಕಾಲ ಹರಣ ಮಾಡುತ್ತಿರುವುದು ಆರೋಪ ಕೇಳಿ ಬಂದಿದೆ. ಇನ್ನಾದ್ರೂ ಹೆಚ್ಚೆತ್ತು ಸರ್ಕಾರ ಈ ಬಗ್ಗೆ ಗಮನ ಹರಿಸಲಿ ಅನ್ನೋದೇ ನಮ್ಮ ಆಶಯ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.