ಕುಂದಗೋಳ –
ಕುಂದಗೋಳ ದಲ್ಲಿ ಘರ್ಜಿಸಿದ ಫೈರ ಬ್ರ್ಯಾಂಡ್ ಬಸನಗೌಡ್ರ ಪಾಟೀಲ ಯತ್ನಾಳ ಕುಂದಗೋಳ ಮತ ಕ್ಷೇತ್ರದ ಹಿರೇಹರಕುಣಿ ಗ್ರಾಮದಲ್ಲಿ ಭಾಜಪ ಅಭ್ಯರ್ಥಿ ಎಂ ಆರ್ ಪಾಟೀಲ ಅವರ ಪರವಾಗಿ ರೊಡ್ ಶೋ ಮೂಲಕ ಮತಯಾಚನೆ ಮಾಡಿದರು
ಇದೇ ವೇಳೆ ಮಾತನಾಡಿದ ಅವರು ಈ ಬಾರಿ ಕಾಂಗ್ರೆಸ್ ಮುಕ್ತ ಕುಂದಗೊಳ ಮಾಡುವಂತೆ ಕರೆಕೊಟ್ಟ ಅವರು ಪಕ್ಷದ್ರೋಹಿಗಳನ್ನು ಮನೆಗೆ ಅಟ್ಟುವಂತೆ ಹೇಳುತ್ತಾ ಪಕ್ಷದಿಂದ ವ್ಯಕ್ತಿ ಹೊರತು ವ್ಯಕ್ತಿಗಳಿಂದ ಪಕ್ಷವಲ್ಲ ಎಂದರು
ಈ ಬಾರಿ ರಾಜ್ಯದಲ್ಲಿ ಭಾಜಪ ಸರ್ಕಾರ ಬರುತ್ತದೆ. ನಿಮ್ಮ ಕ್ಷೇತ್ರದ ಅಭಿವೃದ್ಧಿ ಪಡಿಸಲು ಕುಂದಗೋಳ ಕ್ಷೇತ್ರದಿಂದ ಭಾಜಪ ಅಭ್ಯರ್ಥಿಗಳಾದ ಎಂ ಆರ್ ಪಾಟೀಲ ಅವರನ್ನು ವಿಧಾನ ಸಭೆಗೆ ಕಳಿಸಿಕೊಡಿ ಎಂದರು
ಈ ಸಂದರ್ಭದಲ್ಲಿ ಮಾತನಾಡಿದ ಎಂ ಆರ್ ಪಾಟೀಲ ಅವರು ಯಾವುದೇ ಅಧಿಕಾರ ಇಲ್ಲದೆ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ನಮ್ಮ ಡಬಲ್ ಇಂಜಿನ್ ಸರ್ಕಾರಗಳಿಂದ ಮಾಡಲಾಗಿದೆ ಈ ಭಾರಿ ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಕುಂದಗೋಳ ಮತ ಕ್ಷೇತ್ರವನ್ನು ಮಾದರಿ ಮತ ಕ್ಷೇತ್ರವನಾಗಿಸಿ ಮಾಡಿ ತೊರಿಸುತ್ತೆನೆ ಎಂದರು ಸಹಸ್ರ ಸಹಸ್ರ ಸಂಖ್ಯೆ ಯಲ್ಲಿ ಸೇರಿದ್ದ ಅಭಿಮಾನಿಗಳು ಘೋಷಣೆಯ ಗಂಟೆ ಮೊಳಗಿಸಿದರು.
ಸುದ್ದಿ ಸಂತೆ ನ್ಯೂಸ್ ಕುಂದಗೋಳ…..