ಆಟೋ ಚಾಲಕರಿಗೆ 3000 ರೂಪಾಯಿ ಪ್ಯಾಕೇಜ್ ಘೋಷಿಸಿದ ಯಡಿಯೂರಪ್ಪ ಮತ್ತೊಮ್ಮೆ ಚಾಲಕರ ನೆರವಾದ ರಾಜ್ಯ ಸರ್ಕಾರ…..

Suddi Sante Desk

ಬೆಂಗಳೂರು –

ಮಹಾಮಾರಿ ಕೋವಿಡ್ ನ ಲಾಕ್ ಡೌನ್ ನಿಂದಾಗಿ ಯಾವುದೇ ದುಡಿಮೆ ಇಲ್ಲದೇ ಸಂಕಷ್ಟದಲ್ಲಿರುವ ರಾಜ್ಯದಲ್ಲಿನ ಆಟೋ ಚಾಲಕರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೊಮ್ಮೆ ಟಾನಿಕ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಯಾವುದೇ ದುಡಿಮೆ ಇಲ್ಲದೇ ಆರ್ಥಿಕವಾಗಿ ಸಂಕಷ್ಟದಲ್ಲಿರುವ ನಾಡಿನ ಆಟೋ ಚಾಲಕರಿಗೆ ಮತ್ತೆ 3000 ರೂಪಾಯಿಗಳ ವಿಶೇಷ ಪ್ಯಾಕೇಜ್ ನೀಡಿದ್ದಾರೆ.

ನಾಡಿನ ಎಲ್ಲಾ ಆಟೋ ಚಾಲಕರಿಗೆ ಈ ಒಂದು ಯೋಜನೆಯ ಲಾಭ ಸಿಗಲಿದ್ದು ಒಟ್ಟು 5 ಕೋಟಿ ರೂಪಾಯಿ ಅನ್ನು ಇದಕ್ಕಾಗಿ ಮೀಸಲಾಗಿಸಿಟ್ಟು ಯೋಜನೆಯ ಲಾಭವನ್ನು ಪಡೆದುಕೊಳ್ಳುವಂತೆ ಮುಖ್ಯಮಂತ್ರಿ ಹೇಳಿದ್ದು ಅಗತ್ಯವಾದ ದಾಖಲೆಗಳ ನ್ನು ನೀಡಿ ಲಾಭವನ್ನು ಪಡೆದುಕೊಳ್ಳುವಂತೆ ಯಡಿ ಯೂರಪ್ಪ ಅವರು ಆಟೋ ಚಾಲಕರಿಗೆ ಹೇಳಿದ್ದಾರೆ.

ಇದರೊಂದಿಗೆ ಇನ್ನೂ ಏನಾದರೂ ಹೆಚ್ಚಿನ ಪ್ರಮಾಣ ದಲ್ಲಿ ಶಕ್ತಿ ಇದ್ದರೆ ಮತ್ತೊಂದು ಪ್ಯಾಕೇಜ್ ನೀಡಲಾ ಗುತ್ತದೆ ಎಂದು ಹೇಳಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.