ರಸಗೊಬ್ಬರದ ಬೆಲೆ ಹೆಚ್ಚಳ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ – ರೈತರ ಧ್ವನಿಯಾಗಿ ಅರ್ಜುನ್ ಪಾಟೀಲ ನೇತ್ರತ್ವದಲ್ಲಿ ನಡೆಯಲಿದೆ ಪ್ರತಿಭಟನೆ…..ಬನ್ನಿ ಹೋರಾಟಕ್ಕೆ ಕೈ ಜೋಡಿಸಿ…..

Suddi Sante Desk
ರಸಗೊಬ್ಬರದ ಬೆಲೆ ಹೆಚ್ಚಳ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ – ರೈತರ ಧ್ವನಿಯಾಗಿ ಅರ್ಜುನ್ ಪಾಟೀಲ ನೇತ್ರತ್ವದಲ್ಲಿ ನಡೆಯಲಿದೆ ಪ್ರತಿಭಟನೆ…..ಬನ್ನಿ ಹೋರಾಟಕ್ಕೆ ಕೈ ಜೋಡಿಸಿ…..

ಹುಬ್ಬಳ್ಳಿ

ರಸಗೊಬ್ಬರದ ಬೆಲೆ ಹೆಚ್ಚಳ ವಿರೋಧಿಸಿ ಹುಬ್ಬಳ್ಳಿಯಲ್ಲಿ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಯಲಿದೆ ಹೌದು ರೈತರಿಗೆ ಬೆಲೆ ಏರಿಕೆ ಬೇಕಾಗಿಲ್ಲ ನ್ಯಾಯಕ್ಕಾಗಿ ಹೋರಾಡಿ ಎಂಬ ಸಂದೇಶ ದೊಂದಿಗೆ ಈ ಒಂದು ಹೋರಾಟವು ನಗರದಲ್ಲಿ ನಡೆಯಲಿದೆ

ರೈತರು ಈಗಾಗಲೇ ಬರ, ಮಳೆ ಕೊರತೆ, ಸಾಲಬಾಧೆ ಯಿಂದ ಸಂಕಷ್ಟದಲ್ಲಿರುವಾಗ ಕೇಂದ್ರದ ಬಿಜೆಪಿ ಸರ್ಕಾರ ಪ್ರಮುಖ ರಸಗೊಬ್ಬರಗಳ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಏರಿಸಿದೆ. ಮತ್ತು ಯೂರಿಯಾ ಬೆಲೆಗಳ ಏರಿಕೆ ರೈತರಿಗೆ ಮತ್ತಷ್ಟು ಹೊರೆ ತಂದಿದೆ.

ಹುಬ್ಬಳ್ಳಿ-ಧಾರವಾಡ ನಗರ ಜಿಲ್ಲಾ ಯುವ ಕಾಂಗ್ರೆಸ್ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸುತ್ತಿದ್ದು ತಕ್ಷಣವೇ ಬೆಲೆ ಕಡಿತ ಮಾಡುವಂತೆ ಆಗ್ರಹಿಸುತ್ತದೆ ಎಂದು ಯುವ ಘಟಕದ ಅಧ್ಯಕ್ಷ ಅರ್ಜುಲ ಪಾಟೀಲ್ ಹೇಳಿದ್ದಾರೆ

ಇಂದು ಸಮಯ: ಬೆಳಿಗ್ಗೆ 11 ಗಂಟೆಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನೆ ಆರಂಭ ಗೊಂಡು ತಹಶಿಲ್ದಾರ ಕಚೇರಿ ವರೆಗೆ ಸಾಗಲಿದೆ.ರೈತ ಪರ ಈ ಒಂದು ಹೋರಾಟದಲ್ಲಿ ಹುಬ್ಬಳ್ಳಿ-ಧಾರವಾಡ ನಗರದ ಎಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ರೈತರ ಪರ ಹೋರಾಡೋಣ – ಬೀದಿಗಳಲ್ಲಿ ನಮ್ಮ ಧ್ವನಿ ಎತ್ತೋಣ ಎಂದು ಹುಬ್ಬಳ್ಳಿ-ಧಾರವಾಡ ನಗರ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಅರ್ಜುನ್ ಪಾಟೀಲ ಕರೆ ನೀಡಿದ್ದಾರೆ

 

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.