ಜಿಲ್ಲಾ ಫುಲೆ ಟೀಮ್ಸ್ ವೆಬಿನಾರ್ ಸಂಪೂರ್ಣ ಯಶಸ್ವಿ‌ ಹಲವು ವಿಷಯಗಳ ಕುರಿತು ಚರ್ಚೆ ಚಿಂತನೆ…..

Suddi Sante Desk

ಬೀದರ್ –

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ಬೀದರ್ ಜಿಲ್ಲಾ ಘಟಕದ ವತಿಯಿಂದ ಇಂದು KCSR ಸೇವಾ ನಿಯಮಗಳು ವಿಷಯ ಕುರಿತು ವೆಬಿನಾರ್ ನಡೆಯಿತು.

ಈ ವೆಬಿನಾರ್ ಕಾರ್ಯಕ್ರಮವು ಮೈಕ್ರೊಸಾಫ್ಟ್‌ ಟೀಮ್ಸ್ ಆಪ್ ಮೂಲಕ ಆಯೋಜನೆ ಮಾಡಲಾಗಿ ತ್ತು ಈ ಕಾರ್ಯಕ್ರಮ ದ ಸಂಪನ್ಮೂಲ ವ್ಯಕ್ತಿಯಾಗಿ, ತುಮಕೂರು ಉತ್ತರ,ಮಧುಗಿರಿ ಶೈ.ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕನಹಳ್ಳಿ, ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯ ಕನ್ನಡ ಉಪನ್ಯಾಸಕಿಯಾದ ಶ್ರೀಮತಿ ಕವಿತ.ಹೆಚ್.ಪಿ.ರವರು ಸತತ ಮೂರು ಗಂಟೆಗಳ ಕಾಲ ಸರ್ಕಾರಿ ನೌಕರರ ವಿವಿಧ ವೃಂದಗಳು, ನೌಕರ ರ ಸೇವಾವಹಿ ನಿರ್ವಹಣೆ,ನೌಕರರ ರಜಾ ಸೌಲಭ್ಯ ಗಳು,ಇತರೆ ವಿಷಯಗಳ ಬಗ್ಗೆ ವಿಸ್ತೃತವಾಗಿ ಮಾಹಿತಿ ಯನ್ನು ನೀಡಿದರು.

ಈ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಸಂಘ ದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್. ಮುಳ್ಳೂರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಹೆಚ್.ರವರುಗಳು ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದು ಕೊಟ್ಟರು

ಈ ವೆಬಿನಾರ್ ನ ವಿಷಯವು ಎಲ್ಲಾ ಶಿಕ್ಷಕಿಯರಿಗೂ ಅವಶ್ಯಕವಾಗಿತ್ತು.ಬಹುತೇಕ ಶಿಕ್ಷಕಿಯರು ಆಸಕ್ತಿ ವಹಿಸಿ ಭಾಗವಹಿಸಿದ್ದರು.

ಸತತ ಮೂರು ಗಂಟೆಗಳ ಕಾಲ ನಿರಂತರ ಪ್ರಶ್ನೋ ತ್ತರ ಸಂವಾದದೊಂದಿಗೆ ಸುಮಾರು 145 ಕ್ಕೂ ಹೆಚ್ಚು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕಿಯರು ಬಾಗವಹಿಸಿ ಉತ್ತಮ‌ ಅಭಿಪ್ರಾಯ ವ್ಯಕ್ತಪಡಿಸಿದ್ದು ಈ ವೆಬಿನಾರ್ ಕಾರ್ಯಕ್ರಮವು
ಯಶಸ್ವಿಯಾಗಲು ಕಾರಣವಾಯಿತು.

ಈ ಕಾರ್ಯಕ್ರಮವನ್ನು ಆಯೋಜಿಸಿ ಎಲ್ಲರಿಗೂ ಭಾಗವಹಿಸಲು ಅವಕಾಶ ಕಲ್ಪಿಸಿದಂತಹ ಬೀದರ್ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಸಾರಿಕ ಗಂಗಾ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಭುವನೇಶ್ವರಿ ಮತ್ತು ಜಿಲ್ಲಾ ಕೋಶಾಧ್ಯಕ್ಷರು ಇತರೆ ಎಲ್ಲಾ ಪದಾಧಿಕಾರಿಗಳಿಗೂ ರಾಜ್ಯ ಘಟಕ ದಿಂದ ಧನ್ಯವಾದಗಳನ್ನು ಸಲ್ಲಿಸಲಾಯಿತು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.