ಸೈಕಲ್ ತೆಗೆದುಕೊಳ್ಳಲು ಕೂಡಿಟ್ಟಿ ಹಣವನ್ನು ರಾಮ ಮಂದಿರ ನಿರ್ಮಾಣಕ್ಕೆ ಸಮರ್ಪಣೆ ಮಾಡಿದ ಪುಟಾಣಿ – ಪುಟಾಣಿ ಕಾರ್ಯ ನೋಡಿ ಅವಳಿಗೆ ಸೈಕಲ್ ಗಿಪ್ಟ್

Suddi Sante Desk

ಧಾರವಾಡ –

ಸೈಕಲ್ ತಗೆದುಕೊಳ್ಳಲು ಪುಟಾಣಿ ಮಗುವೊಂದು ಹಣವನ್ನು ಕೂಡಿಟ್ಟಿದ್ದಳು. ಕಳೆದ ಒಂದು ವರುಷದಿಂದ ಸೈಕಲ್ ಗಾಗಿ ಕೂಡಿಟ್ಟ ಹಣಕ್ಕೆ ಇನ್ನಷ್ಟು ಕೂಡಿಸಿದರಾಯಿತು ಎಂದುಕೊಂಡಿದ್ದಳು ಪುಟಾಣಿ.

ಆದರೆ ಇಂದು ಅವರ ಮನೆಗೆ ರಾಮ ಮಂದಿರ ನಿರ್ಮಾಣಕ್ಕಾಗಿ ಧನ ಸಹಾಯ ಕೇಳಲು ಹೋಗಿದ್ದಾರೆ. ಮನೆಗೆ ಹೋಗುತ್ತಲೇ ಪುಟಾಣಿ ತಾನು ಕೂಡಿಟ್ಟ 611 ರೂಪಾಯಿ ಹಣವನ್ನು ದೇಣಿಗೆ ನೀಡಿದ್ದಾಳೆ.

ಹೌದು ಇಂಥದೊಂದು ವಿಶೇಷ ಚಿತ್ರಣವೊಂದು ಧಾರವಾಡದಲ್ಲಿ ಕಂಡು ಬಂದಿದೆ‌. ಧಾರವಾಡದ ಕಮಲಾಪುರ ಹೊಸೂರ ಓಣಿಯ ಪ್ರೀತಿ ಮುರಗೇಶ ಹೊನಕೇರಿಗೆ ಇಂದು ದೇಣಿಗೆ ನೀಡಿದ್ದಾಳೆ.

ಪುಟಾಣಿ ಪ್ರೀತಿ ತಾನು ಕೂಡಿಟ್ಟ ಹಣವನ್ನು ನೀಡುತ್ತಿದ್ದಂತೆ ಸ್ಥಳಿಯ ರಾಮಭಕ್ತರು ಆ ಪುಟಾಣಿಯ ಕಾರ್ಯ ಮೆಚ್ಚಿ ಅವಳಿಗೆ ಮರಳಿ ಹೊಸ ಸೈಕಲ‌ ಕೊಡಿಸಿ ಅಭಿನಂದನೆಗಳು ಸಲ್ಲಿಸಿ ಶುಭಾಶಯಗಳು ಕೋರಿದರು.

ಈ ಸಂದರ್ಭದಲ್ಲಿ ಶ್ರೀನಿವಾಸ ಕೋಟ್ಯಾನ ಬಸವರಾಜ ಬಾಳಗಿ ,ಈರಯ್ಯ ರಾಚಯ್ಯನವರ, ನಿಂಗಪ್ಪ ಸಪ್ಪುರಿ, ಬಸವರಾಜ ಗಮನಗೋಳ, ಮುರಗೇಶ ಹೊನಕೇರಿ, ಹಾಗೂ ಗುರು ಹಿರಿಯರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.