ಬೆಂಗಳೂರು –
ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಗಾಗಿ ಒತ್ತಾಯ ಮಾಡಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಮಾಡು ಇಲ್ಲವೆ ಮಡಿ ಹೋರಾಟ ಮುಂದುವರೆದಿದೆಕಳೆದ 13 ದಿನಗಳಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ ಈ ಹೋರಾಟ ನಡೆಯುತ್ತಿದ್ದು ಶಾಂತರಾಮ್ ಅವರ ನೇತೃತ್ವದಲ್ಲಿ ಹಗಲು ರಾತ್ರಿ ಎನ್ನದೆ ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ
ಪ್ರಮುಖವಾಗಿ OPS ಜಾರಿಗೊಳಿಸಬೇಕೆಂದು ಒತ್ತಾಯಿಸಿ ಈ ಒಂದು ಪ್ರತಿಭಟನೆ ನಡೆಯುತ್ತಿದೆ ಕರ್ನಾಟಕ ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರ ಸಂಘ ನಡೆಸುತ್ತಿರುವ ಪ್ರತಿಭಟನೆ ಇಂದಿಗೆ 13 ದಿನಕ್ಕೆ ಕಾಲಿಟ್ಟಿದೆ.ಇನ್ನೂ ಪ್ರತಿಭಟನೆಯ ಸ್ಥಳಕ್ಕೆ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಪಾಲ್ಗೊಂಡು ಬೆಂಬಲ ವನ್ನು ನೀಡಿದ್ದಾರೆ.
ಎಲ್ಲರೂ ಕೂಡಾ ಅನ್ಯಾಯ ಸರಿಪಡಿಸಲು ತಾವು ಈ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿ ಕೊಳ್ಳುವುದಾಗಿ ಪ್ರಕಟಿಸಿದ್ದಾರೆ ಆದರೆ ಸಂಪೂರ್ಣ ಬೇಡಿಕೆ ಈಡೇರಿಕೆ ಕುರಿತು ಯಾರಿಂ ದಲೂ ಉತ್ತರ ಸಿಕ್ಕಿಲ್ಲ ಹೀಗಾಗಿ ನೌಕರರ ಪ್ರತಿಭ ಟನೆ ಮುಂದುವರೆದಿದೆ.
ನಗರದ ಫ್ರೀಡಂ ಪಾರ್ಕ್ ನಲ್ಲಿ ಈ ಒಂದು ಮಾಡು ಇಲ್ಲವೆ ಹೋರಾಟ ನಡೆಯುತ್ತಿದ್ದು ಬೃಹತ್ ಪ್ರತಿಭ ಟನೆಯಲ್ಲಿ ಇಂದು ಮತ್ತು ನಾಳೆ ಸಾಕಷ್ಟು ಪ್ರಮಾ ಣದಲ್ಲಿ ನೌಕರರು ಪಾಲ್ಗೊಂಡು ಶಕ್ತಿ ಯನ್ನು ತುಂಬಲಿದ್ದಾರೆ.ರಜೆ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ನೌಕರರು ಆಗಮಿಸುತ್ತಿ ದ್ದಾರೆ.
ಇನ್ನೂ ರಾಜಕಾರಣಿಗಳು,ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಈ ಪ್ರತಿಭಟನೆ ಯಲ್ಲಿ ಭಾಗವಹಿಸಿ ತಮ್ಮ ಬೆಂಬಲ ವ್ಯಕ್ತಪಡಿಸು ತ್ತಿದ್ದಾರೆ. ಪ್ರತಿಯೊಬ್ಬರೂ ಕೂಡಾ ಮಾತನಾಡಿ ಕಳೆದ ಹೋರಾಟ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ.ಈ ಸಮಸ್ಯೆಯನ್ನು ಪರಿಹರಿಸಲು ಅವರು ಇವರೊಂ ದಿಗೆ ಮಾತನಾಡುತ್ತೇವೆ ಎಂದು ಹೇಳಿ ಹೋಗು ತ್ತಿದ್ದಾರೆ
ಆದರೆ ಸಮಸ್ಯೆ ಇತ್ಯರ್ಥ ಕುರಿತು ಸ್ಪಷ್ಟ ಮಾಹಿತಿ ಯಾರಿಂದಲೂ ಸಿಗುತ್ತಿಲ್ಪ.ಹೀಗಾಗಿ ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ಮುಂದುವರೆದಿದೆ.ಕರ್ನಾಟಕ ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರ ಸಂಘದವರ ಈ ಒಂದು ಹೋರಾಟಕ್ಕೆ ಇನ್ನಾದರೂ ರಾಜ್ಯ ಸರ್ಕಾರ ಸ್ಪಂದಿಸಿ ಬೇಡಿಕೆ ಈಡೇರಿಸಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..