ಬೆಂಗಳೂರು –
ಕಳೆದ ಹಲವಾರು ವರ್ಷಗಳಿಂದ ವರ್ಗಾವಣೆ ಇಲ್ಲದೇ ಪರದಾಡುತ್ತಿರುವ ನಾಡಿನ ಶಿಕ್ಷಕರಿಗೆ ಡಿಸೆಂಬರ್ 13 ರಿಂದ ಬೆಳಗಾವಿಯಲ್ಲಿ ಆರಂಭವಾಗಲಿದ್ದು ಈ ಒಂದು ಅಧಿವೇಶ ನದಲ್ಲಿಯೇ ಶೇಕಡಾ 25 ನ್ನು ರದ್ದು ಮಾಡಿ ಸ್ವಂತ ಜಿಲ್ಲೆಗೆ ವರ್ಗಾವಣೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕಾಯ್ದೆ ಯನ್ನು ಜಾರಿಗೆ ತರುವಂತೆ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಒತ್ತಾಯ ಮಾಡಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು ಬೆಳಗಾವಿಯ ಅಧಿವೇಶನದಲ್ಲಿ ಸ್ವಂತ ಜಿಲ್ಲೆಗೆ ವರ್ಗಾವಣೆ ನೀಡಲು ಕಾಯ್ದೆ ಜಾರಿಗೊಳಿಸಬೇಕು.ಹಾಗೂ ಶೇಕಡಾ 25 ವರ್ಗಾವಣೆ ನಿಯಮ ರದ್ದು ಪಡಿಸುವಂತೆ ನಾಡಿನ ಶಿಕ್ಷಕರ ಪರವಾಗಿ ರಾಜ್ಯ ಸರ್ಕಾರದ ಅದರಲ್ಲೂ ವಿಶೇಷವಾಗಿ ಮುಖ್ಯಮಂತ್ರಿ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದರು. ಶಿಕ್ಷಕರ ವರ್ಗಾವಣೆಯಲ್ಲಿ ಸುಮಾರು ತಾಲೂಕುಗಳು ಲಾಕ್ ಆಗಿದ್ದು ಹೆಚ್ಚು ಸೇವೆ ಸಲ್ಲಿಸಿದ ಶಿಕ್ಷಕರಿಗೆ ಅನ್ಯಾಯ ವಾಗಿದ್ದು ಅದಕ್ಕಾಗಿ ವರ್ಗಾವಣೆ ವಂಚಿತ ಎಲ್ಲ ಶಿಕ್ಷಕ ಬಂಧುಗಳು ಬೆಳಗಾವಿ ಅಧಿವೇಶನದಲ್ಲಿ ಈ ನಿಯಮ ವನ್ನು ರದ್ದು ಪಡಿಸಲು ಸ್ವಂತ ಜಿಲ್ಲೆಗೆ ವರ್ಗಾವಣೆ ಮಾಡಲು ಮನವಿ ನೀಡಲು ಸಂಘಟಿತರಾಗಿ
ವಿಧಾನ ಸಭೆಯ ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಹಾಗೂ ಶಿಕ್ಷಣ ಸಚಿವರಿಗೆ ಹಾಗೂ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರಿಗೆ ಒತ್ತಡ ಹಾಕಲು ಅಧಿವೇ ಶನದಲ್ಲಿ ಶೇಕಡ ಇಪ್ಪತ್ತೈದು ನಿಯಮವನ್ನು ರದ್ದುಪಡಿಸ ಬೇಕು ಹಾಗೂ ಸ್ವಂತ ಜಿಲ್ಲೆಗೆ ವರ್ಗಾವಣೆ ( OTS) ಜಾರಿ ಗೊಳಿಸುವ ಬಗ್ಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದರು. ರಾಜ್ಯದ ವರ್ಗಾವಣೆ ವಂಚಿತರಾದ ಶಿಕ್ಷಕರಿಗೆ ಕರೆ ನೀಡಿ ದರು ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾ ಧ್ಯಕ್ಷ ಪವಾಡೆಪ್ಪ ಅವರು