This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

7ನೇ ವೇತನ ಆಯೋಗಕ್ಕೆ ಅಧ್ಯಕ್ಷರನ್ನು ಘೋಷಣೆ ಮಾಡಿದ CM ಅವರಿಗೆ,ನಿರಂತರವಾಗಿ ಪ್ರಯತ್ನಿಸಿದ ರಾಜ್ಯಾಧ್ಯಕ್ಷರಿಗೆ ಧನ್ಯವಾದಗಳು – ಶಿಗ್ಗಾವಿ ತಾಲ್ಲೂಕಿನ ಸಮಸ್ತ ನೌಕರರ ಪರವಾಗಿ ಅರುಣ ಹುಡೇದಗೌಡ್ರ ರಿಂದ ಧನ್ಯವಾದಗಳು

WhatsApp Group Join Now
Telegram Group Join Now

ಹಾವೇರಿ

ಕಳೆದ ಹಲವಾರು ದಿನಗಳಿಂದ ಕಾಯುತ್ತಿದ್ದ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ರಚನೆ ಕುರಿತಂತೆ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶವನ್ನು ಮಾಡಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಹಾವೇರಿ ಜಿಲ್ಲೆಯ ಅದರಲ್ಲೂ ವಿಶೇಷ ವಾಗಿ ಶಿಗ್ಗಾವಿ ತಾಲ್ಲೂಕಿನ ಸಮಸ್ತ ಸರ್ಕಾರಿ ನೌಕರರ ಪರವಾಗಿ ಧನ್ಯವಾದಗಳನ್ನು ಸಲ್ಲಿಸ ಲಾಗಿದೆ.

ಹೌದು ತಾಲ್ಲೂಕಿನ ಸಮಸ್ತ ಸರ್ಕಾರಿ ನೌಕರರ ಪರವಾಗಿ ಸರ್ಕಾರಿ ನೌಕರರ ಸಂಘದ ನಾಯಕ ರಾಗಿರುವ ಅರುಣ ಹುಡೇದಗೌಡ್ರು ಧನ್ಯವಾದಗ ಳನ್ನು ಸಲ್ಲಿಸಿದ್ದಾರೆ.ಹಾಗೇ ಈ ಒಂದು ವಿಚಾರದ ಲ್ಲಿ ನಿರಂತರವಾಗಿ ಪ್ರಯತ್ನವನ್ನು ಮಾಡಿ ಜಾರಿಗೆ ಮಾಡಲು ಹಗಲಿರುಳು ಕಾರ್ಯವನ್ನು ಮಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ರಾಗಿರುವ ಷಡಾಕ್ಷರಿ ಅವರಿಗೂ ಕೂಡಾ ತಾಲ್ಲೂಕಿನ ಸಮಸ್ತ ಸರ್ಕಾರಿ ನೌಕರರ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿ ದ್ದಾರೆ.

ಇದರೊಂದಿಗೆ ಈ ಒಂದು ವೇತನ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿರುವ ನಿವೃತ್ತ ಮುಖ್ಯಕಾರ್ಯದರ್ಶಿ ಸುಧಾಕರ್ ರಾವ್ ಅವರಿಗೆ ಅಭಿನಂದನೆಗಳನ್ನು ಅರುಣ ಹುಡೇದ ಗೌಡ್ರು ಸಲ್ಲಿಸಿ ಸಮಿತಿ ಈ ಕೂಡಲೇ ವರದಿ ಯನ್ನು ಸಿದ್ದಮಾಡಿ ಸರ್ಕಾರಕ್ಕೆ ಸಲ್ಲಿಸಲಿ ಚುನಾವಣೆಯ ಮುನ್ನವೇ ಈ ಒಂದು ವೇತನ ಆಯೋಗವನ್ನು ರಾಜ್ಯದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಅನುಷ್ಠಾನ ಮಾಡಲಿ ಎಂದು ಒತ್ತಾಯವನ್ನು ಮಾಡಲಾಗಿದೆ.

 

ವರದಿ – ಸುದ್ದಿ ಸಂತೆ ನ್ಯೂಸ್ ಡೆಸ್ಕ್

 


Google News

 

 

WhatsApp Group Join Now
Telegram Group Join Now
Suddi Sante Desk