ವಿದ್ಯುತ್ ತಂತಿಯಿಂದ ಬೆಂಕಿ ಅವಘಡ – ಸುಟ್ಟ ಕರಕಲಾಯಿತು 9 ಎಕರೆ ಕಬ್ಬು 25 ಮಾವಿನ ಮರ ಬೆಂಕಿಗಾಹುತಿ

Suddi Sante Desk

ಧಾರವಾಡ –

ವಿದ್ಯುತ್ ತಂತಿಯಿಂದ ಬೆಂಕಿ ಅವಘಡವೊಂದು ಸಂಭವಿಸಿ 9 ಎಕರೆ ಕಬ್ಬು, 25 ಮಾವಿನ ಮರ ಸುಟ್ಟು ಭಸ್ಮವಾದ ಘಟನೆ ಧಾರವಾಡದಲ್ಲಿ ನಡೆದಿದೆ‌.

ಧಾರವಾಡದ ದಡ್ಡಿ ಕಮಲಾಪುರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಧಾರವಾಡ ತಾಲೂಕಿನ ದಡ್ಡಿ ಕಮಲಾಪುರ ಗ್ರಾಮದ ಅಶೋಕ ಮಾನೆ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ಒಂದು ಅವಘಡ ನಡೆದಿದೆ‌.

ಜಮೀನನ್ನು ಲಾವಣಿ ಪಡೆದು ರೈತ ನಾಗರಾಜ್ ಕುಲಕರ್ಣಿ ಎಂಬುವರು ಬೆಳೆ ಬೆಳೆದಿದ್ದರು.

ಜಮೀನಿನ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳಿಂದ ಈ ಒಂದು ಅವಘಡ ನಡೆದಿದೆ.

ತಂತಿಗಳು ಜೋತು ಬಿದ್ದು ಉಂಟಾಗಿದ್ದ ಶಾರ್ಟ್ ಸರ್ಕ್ಯೂಟ್ ನಿಂದಲೇ ಈ ಒಂದು ದುರಂತ ಸಂಭವಿಸಿದೆ.

ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನೂ ವಿಷಯ ತಿಳಿದ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.