ಹೆಬ್ಬಳ್ಳಿ ಯ ಕಿರಿಯ ಉರ್ದು ಶಾಲೆ ಯಲ್ಲಿ ಗುರುವಂದನಾ ಕಾರ್ಯಕ್ರಮ – ಸಮಿತಿಯ ಸರ್ವ ಸದಸ್ಯರಿಗೆ ಸನ್ಮಾನ ಗೌರವ…..

Suddi Sante Desk

ಹೆಬ್ಬಳ್ಳಿ –

ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ ಹೆಬ್ಬಳ್ಳಿಯ ನೂತನ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಅದ್ಯಕ್ಷರಾದ ಮೌಲಾಸಾಬ ಹ ದೊಡಮನಿ ಇಂದು ಶಾಲೆಯ ಎಲ್ಲಾ ಗುರು ವೃಂದಕ್ಕೆ ಹಾಗೂ ಸಮಿತಿಯ ಉಪಾದ್ಯಕ್ಷರು ಹಾಗೂ ಎಲ್ಲಾ ಸದಸ್ಯರುಗಳಿಗೆ ಪ್ರಥಮ ಸಭೆಯಲ್ಲಿ ಸತ್ಕರಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮುಖ್ಯ ಶಿಕ್ಷಕ ಜಿ ಬಿ ಶೆಟ್ಟರ್ ಗುರುವೆಂದರೆ ವ್ಯಕ್ತಿಯಲ್ಲ ಅದೊಂದು ಶಕ್ತಿ ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಬೆಳಕಿ ನೆಡೆಗೆ ಕರೆದೊಯ್ಯುವ ಶಬ್ದವೇ ಗುರು,ಇಂತಹ ಗುರುಗಳಿಗೆ ವಂದಿಸುವ ಈ ಗುರುವಂದನೆ ಕಾರ್ಯ ಕ್ರಮವನ್ನು ತುಂಬಾ ವಿಶಿಷ್ಟವಾದ ರೀತಿ ಯಲ್ಲಿ ನಡೆಸಿದ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಅದ್ಯಕ್ಷರು ಉಪಾದ್ಯಕ್ಷರು ಸರ್ವ ಸದಸ್ಯರು ಒಳ್ಳೆಯ ಸಂಪ್ರದಾಯ ಹಾಕಿದ್ದು ಇದು ಮಾದರಿಯಾಗಿದೆ ಎಂದರು.

ಇಸ್ಲಾಂ ಧರ್ಮ ಗುರು ಮೌಲಾನಾ ಶಾಕೀರಲಿ ಮಾತನಾಡಿದರು, ಅದ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಅದ್ಯಕ್ಷರಾದ ಮೌಲಾಸಾಬ ಹ ದೊಡಮನಿ ಮಾತನಾಡಿ ಗುರುವಿ ನಿಂದ ಬಂಧುಗಳು ಗುರುವಿನಿಂದ ಪರದೈವ ಗುರುವಿಂದಲಾದುದು ಪುಣ್ಯಲೋಕಕ್ಕೆ, ಗುರುವಿ ನಿಂದ ಮುಕ್ತಿ ಸರ್ವಜ್ಞ ಎನ್ನುವ ಹಾಗೆ ಈ ಸಮಾಜ ಮೊದಲು ಗುರುವಿಗೆ ಗೌರವ ನೀಡಬೇಕು

ಒಂದು ಕಲ್ಲು ಶಿಲೆಯಾಗಬೇಕಾದರೆ ಶಿಲ್ಪಿಯ ಅವಶ್ಯಕತೆ ಇದೆ, ಅದೇ ರೀತಿ ಒಬ್ಬ ವಿದ್ಯಾರ್ಥಿ ಪರಿಪೂರ್ಣ ವ್ಯಕ್ತಿಯಾಗಬೇಕಾದರೆ ಒಬ್ಬ ಗುರು ಅತ್ಯವಶ್ಯಕ ಹರಮುನಿದರೆ ಗುರುಕಾಯುವ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಮಾತು ಗುರುವಿನ ಮಹತ್ವವನ್ನು ಸಾರುತ್ತದೆ ಎಂದರು,ಉಪಾದ್ಯಕ್ಷರಾದ ಹೀನಾಕೌಸರ ಮೊರಬ ಸೇರಿದಂತೆ ಶಾಲಾಭಿವೃದ್ದಿ ಸಮಿತಿಯ ಸರ್ವಸದಸ್ಯರು ಹಾಗೂ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆ ಜನತಾ ಪ್ಲಾಟ ಹೆಬ್ಬಳ್ಳಿಯ ಮುಖ್ಯ ಗುರು,ಜಿ ಬಿ ಶೆಟ್ಟರ್ ಉರ್ದು ಶಾಲೆಯ ಮುಖ್ಯ ಶಿಕ್ಷಕಿ ಬಿ ಎಂ ಸುತಾರ ಸಮಾಜಸೇವಕಿ ಮಮ್ತಾಜ ಇದ್ದರು. ಎಲ್ ಐ ಲಕ್ಕಮ್ಮನವರ ಸ್ವಾಗತಿಸಿದರು, ಮಮ್ತಾಜ ನಿರೂಪಿಸಿದರು, ಕೆ ಎಂ ಶಿವಳ್ಳಿ ವಂದಿಸಿದರು.

ವರದಿ – ಎಲ್ ಐ ಲಕ್ಕಮ್ಮನವರ ಶಿಕ್ಷಕರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.