ಶಿಕ್ಷಕರ ನೋವಿಗೆ ಮೌನ ಮುರಿದ KSPSTA ಸಂಘ – ನಿಮ್ಮ ನೋವಿಗೆ ಬರುವ ದಿನಗಳಲ್ಲಿ ಸ್ಪಂದಿಸುತ್ತೆವೆ ಎಂದರು ಸಂಘಟನೆ ನಾಯಕರು…..

Suddi Sante Desk

ಬೆಂಗಳೂರು –

ವರ್ಗಾವಣೆಯ ವಿಚಾರದಲ್ಲಿ ಇಂದು ಬೆಳಿಗ್ಗೆ ಯಿಂದ ರಾಜ್ಯದ ತುಂಬೆಲ್ಲಾ ಶಿಕ್ಷಕರು ಸಾಕಷ್ಟು ಪ್ರಮಾಣದಲ್ಲಿ ಅನಾನುಕೂಲ ಸಮಸ್ಯೆ ನೋವು ನರಕಯಾತನೆ ಅನು ಭವಿಸುತ್ತಿದ್ದಾರೆ.ಹಲವೆಡೆ ಪ್ರತಿಭಟನೆ ಆಕ್ರೋಶವನ್ನು ವ್ಯಕ್ತಪಡಿಸಿ ಶಿಕ್ಷಕರು ಪರದಾಡಿದ್ದು ಕಂಡು ಬಂದಿದ್ದು ಒಂದು ವಿಚಾರವಾದರೆ ಇನ್ನೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಶಿಕ್ಷಕರ ಸಮಸ್ಯೆ ಗೆ ಸ್ಪಂದಿಸಿದ್ದು ನಿಮಗೆ ಆಗಿರುವ ನೋವಿಗೆ ನಮಗೂ ತುಂಬಾ ನೋವಾಗಿದೆ ಎಂದರು

ಜೊತೆಗೆ ಸಂಘವು ನಿರಂತರವಾಗಿ ಸಾಕಷ್ಟು ಪ್ರಮಾಣದಲ್ಲಿ ಏನೇಲ್ಲಾ ಪ್ರಯತ್ನ ಮಾಡಿದರು ಕೂಡಾ ಈ ರೀತಿಯ ನೋವು ನಮಗೂ ಘಾಸಿಗೊಳಿಸಿದ್ದು ಬರುವ ದಿನಗಳಲ್ಲಿ ನಿರಂತರ ಪ್ರಯತ್ನ ಮಾಡುತ್ತಾ ಶಿಕ್ಷಕರ ಪರವಾಗಿ ಸಂಘ ಟನೆ ಕೆಲಸವನ್ನು ಮಾಡುತ್ತದೆ ಎಂದು ಸಂಘದ ರಾಜ್ಯಾಧ್ಯ ಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಅವರು ಸಂದೇಶ ಕಳಿಸಿ ನಿಮ್ಮೊಂದಿಗೆ ನಾವು ಇದ್ದೇವಿ ಎಂದಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.