ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಕಂಟ್ರೋಲ್‌ ರೂಂ ಆರಂಭ – ಅರುಣಸಿಂಗ್ ಗೆ ಸಾಥ್ ನೀಡಿದ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್…..

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಭಾರತೀಯ ಜನತಾ ಪಾರ್ಟಿ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಭೆಯ ಆರಂಭಕ್ಕೂ ಮುನ್ನ ವೈದ್ಯಕೀಯ ವಿಭಾಗ ಹಾಗೂ ಕಂಟ್ರೋಲ್ ರೂಂ ಅನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಉಸ್ತುವಾರಿಗಳಾದ ಅರುಣ ಸಿಂಗ್ ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಜಗದೀಶ ಶೆಟ್ಟರ,ರಾಜ್ಯ ಪ್ರಧಾನ ಕಾರ್ಯದ ರ್ಶಿಗಳಾದ ಮಹೇಶ ಟೆಂಗಿನಕಾಯಿ,ವೈದ್ಯಕೀಯ ಪ್ರಕೋ ಷ್ಠದ ರಾಜ್ಯ ಸಂಚಾಲಕರಾದ ಡಾ.ಮಹೇಶ ನಾಲವಾಡ,
ಈ ವಿಭಾಗದ ಸಂಯೋಜಕರು ಹಾಗೂ ಪಾಲಿಕೆ ಸದಸ್ಯ ರಾದ ಈರೇಶ ಅಂಚಟಗೇರಿ,ಪಾಲಿಕೆ ಸದಸ್ಯರಾದ ಶ್ರೀಮತಿ ಮೀನಾಕ್ಷಿ ವಂಟಮುರಿ,ಪ್ರಮುಖರಾದ ಶ್ರೀ ಜಗದೀಶ ಬುಳ್ಳಾನವರ,ಶಕ್ತಿ ಹಿರೇಮಠ ,ಡಾ.ಕ್ರಾಂತಿ ಕಿರಣ,
ಡಾ ಎಮ್.ಜೆ.ಜೀವಣ್ಣವರ,ಡಾ.ವೆಂಕಟರೆಡ್ಡಿ,ಡಾ.ವಿವೇಕ ಪಾಟೀಲ,ಹಾಗೂ ಇತರರು ಉಪಸ್ಥಿತರಿದ್ದರು..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.