OPS ವಿಚಾರದಲ್ಲಿ CM ನಿನ್ನೆ ಲಿಖಿತ ರೂಪದಲ್ಲಿ ಒಂದು ಉತ್ತರ ಇಂದು ಮಾತಿನಲ್ಲಿ ಸಂತೋಷದ ಸುದ್ದಿ – ಏನೋ ಆಗಲಿ OPS ಜಾರಿಗೆ ಬರಲಿ…..

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ಹೊಸ ಪಿಂಚಣಿ ಯೋಜನೆ ರದ್ದು ಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವಂತೆ ಕಳೆದ ಹಲವಾರು ವರ್ಷಗಳಿಂದ ಒತ್ತಾಯ ಕೇಳಿ ಬರುತ್ತಿದ್ದು ಈ ಒಂದು ವಿಚಾರ ಕುರಿತು ನಿನ್ನೆ ಯಷ್ಟೇ ವಿಧಾನ ಸಭೆ ಯಲ್ಲಿ ಶಾಸಕರೊಬ್ಬರು ಪ್ರಶ್ನೆ ಮಾಡಿದರು ಈ ಕುರಿತು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ಈ ಒಂದು ಯೋಜನೆ ಜಾರಿಗೆ ತರುವ ವಿಚಾರ ಸರ್ಕಾರದ ಮುಂದೆ ಇಲ್ಲ ಎಂದಿದ್ದರು ಇನ್ನೂ ಇದೇ ವಿಚಾರ ಕುರಿತು ಇಂದು ಸದನದಲ್ಲಿ ಶಾಸಕ ರೊಬ್ಬರು ಮತ್ತೆ ಪ್ರಶ್ನೆ ಕೇಳಿದ್ದು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದ ಮುಖ್ಯಮಂತ್ರಿ ಅವರು ಇಂದು ಬೇರೆ ಹೇಳಿದ್ದಾರೆ

ಹೌದು ಈ ಒಂದು ಯೋಜನೆಯನ್ನು ನಾವು ಖಂಡಿತವಾಗಿ ಜಾರಿ ತರುತ್ತೇವೆ ಈ ಒಂದು ಕುರಿತು ಬೇರೆ ಬೇರೆ ರಾಜ್ಯ ಗಳಿಂದ ಮಾಹಿತಿಯನ್ನು ಕಳಿಸಿಕೊಡಲು ಹೇಳಿದ್ದು ಮಾಹಿತಿ ಬಂದ ಕೂಡಲೇ ಜಾರಿಗೊಳಲಾಗುತ್ತದೆ ಹೀಗಾಗಿ ಅರ್ಧ ವಿಚಾರ ಬೇಡ ಎನ್ನುತ್ತಾ ಭರವಸೆಯ ಮಾತನ್ನು ಹೇಳಿದರು

ಒಟ್ಟಾರೆ ನಿನ್ನೆ ನಿರಾಶೆಯ ಮಾತನ್ನು ಹೇಳಿದ್ದ ನಾಡ ದೊರೆ ಇಂದು ಸಂತೋಷದ ಸುದ್ದಿ ಯನ್ನು ನೀಡಿದ್ದು ಶೀಘ್ರದಲ್ಲೇ ಜಾರಿಗೆ ಬರಲಿ ಎಂಬೊದು ನಮ್ಮ ಆಶಯವಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.