ಹುಬ್ಬಳ್ಳಿಯಲ್ಲಿ ಟಾಟಾ ಎಸ್ ಪಲ್ಟಿ 12 ವಿದ್ಯಾರ್ಥಿ ಗಳು ಸೇರಿ ಹಲವರಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು…..

Suddi Sante Desk

ಹುಬ್ಬಳ್ಳಿ –

ವಿದ್ಯಾರ್ಥಿಗಳಿದ್ದ ಟಾಟಾ ಎಸ್ ಪಲ್ಟಿಯಾಗಿ ವಿದ್ಯಾರ್ಥಿ ಗಳು ಸೇರಿದಂತೆ ಹಲವರು ತೀವ್ರವಾಗಿ ಗಂಭೀರವಾಗಿ ಗಾಯಗೊಂಡ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಮಣಕವಾಡ ಗ್ರಾಮದ ಬಳಿ ನಡೆದಿದೆ

12 ವಿದ್ಯಾರ್ಥಿಗಳು ಸೇರಿದಂತೆ ಹಾಗೂ ಆರು ಜನರು ಸ್ಥಳೀಯರು ಗಾಯಗೊಂಡಿದ್ದಾರೆ.ಮಣಕವಾಡ ಗ್ರಾಮ ದಿಂದ ನಲವಡಿ ಖಾಸಗಿ ಶಾಲೆಗೆ ವಿದ್ಯಾರ್ಥಿಗಳನ್ನ ಕರೆದು ಕೊಂಡು ಹೋಗುತ್ತಿದ್ದ ಟಾಟಾ ಏಸ್.ಏಕಾಏಕಿ ಟಾಟಾ ಏಸ್ ತಿರುಗಿಸಿಕೊಂಡಾಗ ಪಲ್ಟಿಯಾಗಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಗಾಯಾಳುಗಳನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಸರ್ಕಾರಿ ಬಸ್ ಕೊರತೆ ಕಾರಣದಿಂದಾಗಿ ಈ ಒಂದು ಅಪಘಾತವಾಗಿದೆ.ಸರ್ಕಾರಿ ಬಸ್ ಕೊರತೆ ಕಾರಣ ಅಪಘಾತಕ್ಕೆ.ಅಣ್ಣಿಗೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಕೊರತೆಯಿಂದ ಅನಿವಾರ್ಯವಾಗಿ ಖಾಸಗಿ ವಾಹನಗಳನ್ನ ಮಕ್ಕಳು ಅವಲಂಬನೆ ಆಗಿದ್ದು ಖಾಸಗಿ ವಾಹನ ಸವಾರರು ಬೇಕಾಬಿಟ್ಟಿ ವಾಹನ ಚಲಾವಣೆ ಮಾಡುವುದೇ ಇದಕ್ಕೆ ಕಾರಣವಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.