ರಾಜ್ಯ ಸರ್ಕಾರಿ ನೌಕರರಿಗೆ ಕನಿಷ್ಟ 12 ಸಾವಿರದಿಂದ 45 ಸಾವಿರದ ವರಿಗೆ ವೇತನ ಹೆಚ್ಚಳವಾಗಲಿದೆ ಕೈ ಹಾಕಿದರೆ ನಾವು ಯಾವುದನ್ನೂ ಬಿಡೊದಿಲ್ಲ ಎನ್ನುತ್ತಾ NPS,OTS ಸೇರಿದಂತೆ ಸರ್ಕಾರಿ ನೌಕರರ ಸಮಸ್ಯೆಗಳ ಕುರಿತಂತೆ ಷಡಾಕ್ಷರಿ ಅವರು ಮಾತನಾಡಿ ಆತಂಕದಲ್ಲಿ ರುವರಿಗೆ ನೆಮ್ಮದಿಯ ಮಾತುಗಳ ನ್ನಾಡಿದ್ದಾರೆ…..

Suddi Sante Desk

ಅಥಣಿ –

ರಾಜ್ಯ ಸರ್ಕಾರದ ನೌಕರರ ಕೆಲವೊಂದಿಷ್ಟು ಸಮಸ್ಯೆಗಳ ಕುರಿತಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ರಾಗಿರುವ ಷಡಾಕ್ಷರಿ ಅವರು ಮಾತನಾಡಿದ್ದಾರೆ.ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಮಾತನಾಡಿದ ಅವರು ಆಗಸ್ಟ್ ತಿಂಗಳಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಸಮಿತಿಯಲ್ಲಿ ರಚನೆ ಮಾಡಿ ಜನೇವರಿ ತಿಂಗಳಲ್ಲಿ ಸರ್ಕಾರಿ ಆದೇಶವನ್ನು ಮಾಡಲಾಗುತ್ತಿದೆ.

ನಾನು ಕೂಡಾ ಮುಖ್ಯಮಂತ್ರಿ ಅವರಿಗೆ ಈ ಒಂದು ವಿಚಾರ ಕುರಿತಂತೆ ಕೇಳಿದೆ ನೌಕರರು ಕೇಳತಾ ಇದ್ದಾರೆ ಏನು ಹೇಳಿ ಅಂತಾ ಕೇಳಿದೆ ಮುಕ್ತವಾಗಿ ಹೇಳಿ ಅಂದರು ಹೀಗಾಗಿ ನಾನು ನಿಮ್ಮ ಮುಂದೆ ಮುಕ್ತವಾಗಿ ನಿಮ್ಮ ಮುಂದೆ ಹೇಳತಾ ಇದ್ದೇನಿ ಎಂದರು.ಈ ಒಂದು ವಿಚಾರ ಕುರಿತಂತೆ ಈಗಾಗಲೇ ಸಂಘಟನೆ ಯೊಂದಿಗೆ ನಾನು ಸೇರಿಕೊಂಡು ನಾಲ್ಕೈದು ತಿಂಗಳಿನಿಂದ ಸರ್ಕಾರ ಗಮನ ಸೆಳೆದು ಈಗಾ ಗಲೇ ಅಂತಿಮವಾಗಿದೆ ಇನ್ನೇನು ಆಗಸ್ಟ್ ತಿಂಗಳಲ್ಲಿ ಈ ಒಂದು ಕುರಿತಂತೆ ಸಮಿತಿ ರಚನೆಗೊಳ್ಳಲಿದೆ ಎಂದರು

ಇನ್ನೂ ಆತಂಕ ಗೊಂದಲ ಹೀಗೆ ಕೆಲವರು ಏನೇನು ಹೇಳತಾ ಇದ್ದಾರೆ ನಾವು ಮೊದಲು ಯಾವುದೇ ಕೆಲಸಕ್ಕೆ ಕೈ ಹಾಕೊದಿಲ್ಲ ಹೋಗೊದಿಲ್ಲ ಕೈ ಹಾಕಿದರೆ ಬಿಡೋದಿಲ್ಲ ಎನ್ನುತ್ತಾ ಎದುರಾಗಳಿಗೆ ಹಿಂದೆ ಮುಂದೆ ಮಾತನಾಡುವ ವರಿಗೆ ಖಡಕ್ ಸಂದೇಶವನ್ನು ನೀಡಿದರು.ಇದು ನಮ್ಮ ವಿಚಾರವಾಗಿದ್ದು ಕಳೆದ 10 ವರ್ಷಗಳಲ್ಲಿ ಆಗದಿರುವ ಕೆಲಸ ಕಾರ್ಯಗಳನ್ನು ಈಗ ಮಾಡಿದ್ದೇವೆ ಆದಷ್ಟು ಬೇಗ ಕ್ಯಾಶ್ ಲೇಶ್ ವ್ಯವಸ್ಥೆ ಜಾರಿಗೆ ಬರುತ್ತದೆ

ಇದರೊಂದಿಗೆ ಕಳೆದ ಹಲವಾರು ವರ್ಷಗಳಿಂದ ರಾಜ್ಯದ ಸರ್ಕಾರಿ ದೊಡ್ಡ ಸಮಸ್ಯೆಯಾಗಿರುವ ಎನ್ ಪಿ ಎಸ್ ವಿಚಾರ ಕುರಿತಂತೆ ವಿಶ್ವಾಸವಿಡಿ ಎರಡೂವರೆ ಲಕ್ಷ ಎನ್ ಪಿ ಎಸ್ ನೌಕರರೇ ನಿಮ್ಮ ಸಮಸ್ಯೆ ಕುರಿತಂತೆ ಪರಿಹಾರವಾ ಗಲಿದೆ ಇದರೊಂ ದಿಗೆ ಸ್ವಂತ ಜಿಲ್ಲೆಗೆ ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರ ಸಮಸ್ಯೆ ಕುರಿತಂತೆ ಮಾತನಾಡಿ ಸಮಸ್ಯೆ ಪರಿಹಾರ ಮಾಡೊದಾಗಿ ಹೇಳಿದರು ಇದರೊಂ ದಿಗೆ ಆತಂಕದಲ್ಲಿರುವ ರಾಜ್ಯದ ಸರ್ಕಾರಿ ನೌಕರರಿಗೆ ನೆಮ್ಮದಿಯ ಸುದ್ದಿ ನೀಡುತ್ತಾ ಟಾನಿಕ್ ಸುದ್ದಿಯನ್ನು ನೀಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.