This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

ರಾಜ್ಯದಲ್ಲಿ ಮರೆಯಾದ ಐದು ಜನ ಶಿಕ್ಷಕರು – ಮೃತ ಆದರ್ಶ ಶಿಕ್ಷಕರಿಗೆ ನಾಡಿನೆಲ್ಲೆಡೆ ಶಿಕ್ಷಕರಿಂದ ಭಾವಪೂರ್ಣ ನಮನ ಸಂತಾಪ

WhatsApp Group Join Now
Telegram Group Join Now

ಬೆಂಗಳೂರು –

ಕೋವಿಡ್ ನಿಂದಾಗಿ ರಾಜ್ಯದಲ್ಲಿ ಇಂದು ಕೂಡಾ ಐದು ಜನ ಶಿಕ್ಷಕರು ಮೃತರಾಗಿದ್ದಾರೆ.ಹೌದು ಚುನಾ ವಣೆಯ ಕರ್ತವ್ಯ ಮುಗಿದು ಹಲವು ದಿನಗಳಾದರೂ ಕೂಡಾ ಮನೆಯಲ್ಲಿದ್ದ ಶಿಕ್ಷಕರಿಗೆ ಮಾಹಾಮಾರಿಯ ಕಾಟ ಇನ್ನೂ ತಪ್ಪುತ್ತಿಲ್ಲ ಹೀಗಾಗಿ ಸೋಂಕು ಕಾಣಿಸಿ ಕೊಂಡು ಚಿಕಿತ್ಸೆ ಫಲಿಸದೇ ಆಸ್ಪತ್ರೆಗಳಲ್ಲಿ ಶಿಕ್ಷಕರು ಮೃತರಾಗುತ್ತಿದ್ದು ಇಂದು ಕೂಡಾ ರಾಜ್ಯದಲ್ಲಿ ಮತ್ತೆ ಐದು ಜನ ಶಿಕ್ಷಕರು ಮೃತರಾಗಿದ್ದಾರೆ.ಇನ್ನೂ ನಿಧನ ರಾದ ಶಿಕ್ಷಕರ ಕುರಿತಂತೆ ನೋಡೊದಾದರೆ

ಶ್ರೀಮತಿ ವಿಜಯಲಕ್ಷ್ಮೀ ಪಾಟೀಲ ಸಹ ಶಿಕ್ಷಕಿ ಇವರು ವಿಜಯಪುರ ಜಿಲ್ಲೆಯ ಜಿರಗಾಳ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಇವರಿಗೆ ಸೋಂಕು ಕಾಣಿ ಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು.ಚಿಕಿತ್ಸೆ ಫಲಿಸದೇ ಇಂದು ಇವರು ಮೃತರಾಗಿದ್ದಾರೆ. ವಿಜಯ ಪುರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.

ಶರಣಪ್ಪ ಶೆಟ್ಟೆಪ್ಪ ಪವಾರ ಬಲಕುಂದಿ ತಾಂಡಾ ದಲ್ಲಿ ಶಿಕ್ಷಕರಾಗಿದ್ದ ಇವರು ಕೂಡಾ ಕೋವಿಡ್ ನಿಂದಾಗಿ ಮೃತರಾಗಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖ ಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು.ಚಿಕಿತ್ಸೆ ಫಲಿ ಸದೇ ಇವರು ಮೃತರಾಗಿದ್ದಾರೆ.

ಹೆಚ್ ಎ ಜಮಾದಾರ ಹುಕ್ಕೇರಿಯ ಸರ್ಕಾರಿ ಶಾಲೆ ಯಲ್ಲಿ ಶಿಕ್ಷಕರಾಗಿದ್ದ ಇವರು ಕೂಡಾ ಕರೋನಾ ದಿಂದಾಗಿ ಮೃತರಾಗಿದ್ದಾರೆ.ಸೋಂಕು ಕಾಣಿಸಿಕೊಂ ಡು ಚಿಕಿತ್ಸೆ ಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಚಿಕಿತ್ಸೆ ಫಲಿಸದೇ ಇವರು ಇಂದು ಮೃತರಾಗಿದ್ದಾರೆ.

ಮನೋಹರ ಚಲವಾದಿ ಮುಖ್ಯೋಪಾಧ್ಯಾಯರು ಬಾಲಕಿಯರ ಪ್ರೌಢ ಶಾಲೆ ಗುಳೇದಗುಡ್ಡ ಇವರು ಕೂಡಾ ಕೋವಿಡ್ ನಿಂದಾಗಿ ಮೃತರಾಗಿದ್ದು ಚಿಕಿತ್ಸೆ ಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಿ ಸದೇ ನಿಧನರಾಗಿದ್ದು ನಿಧನಕ್ಕೆ ಜಿಲ್ಲೆಯ ಸಮಸ್ತ ಶಿಕ್ಷಕರ ಬಳಗವು ಸಂತಾಪವನ್ನೂ ವ್ಯಕ್ತಪಡಿಸಿದ್ದಾರೆ.

ವಿಜಯಕುಮಾರ ಕುಲಕರ್ಣಿ ಬದಾಮಿ ತಾಲ್ಲೂಕಿನ ಜಲಗೇರಿ ಗ್ರಾಮದ ಶಿಕ್ಷಕರಾಗಿದ್ದ ಇವರು ಕೋವಿಡ್ ನಿಂದಾಗಿ ಮೃತರಾಗಗಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಇವರು ಚಿಕಿತ್ಸೆ ಫಲಿಸದೇ ನಿಧನರಾಗಿದ್ದು ತಾಲ್ಲೂಕಿನ ಜಿಲ್ಲೆಯ ಸಮಸ್ತ ಶಿಕ್ಷಕರ ಬಳಗವು ಸಂತಾಪವನ್ನು ಸೂಚಿಸಿದ್ದಾರೆ.

ಇನ್ನೂ ಮೃತರಾದ ನಾಡಿದ ಐದು ಜನ ಶಿಕ್ಷಕರಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರು ಭಾವ ಪೂರ್ಣ ನಮನವನ್ನು ಸಲ್ಲಿಸಿದ್ದಾರೆ ಇದರೊಂದಿಗೆ ಅವರನ್ನು ನೆನೆದು ಸಂತಾಪವನ್ನು ಸೂಚಿಸಿದ್ದಾರೆ. ಪವಾಡೆಪ್ಪ, ಗುರು ತಿಗಡಿ, ಎಸ್ ವಾಯ್ ಸೊರಟಿ, ಚಂದ್ರಶೇಖರ್ ಶೆಟ್ರು, ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ, ಶಂಕರ ಘಟ್ಟಿ, ಶರಣಪ್ಪಗೌಡ ಆರ್ ಕೆ, ಎಸ್ ಎಫ್ ಪಾಟೀಲ, ಹನುಮಂತಪ್ಪ ಮೇಟಿ ಮಲ್ಲಿಕಾರ್ಜುನ ಉಪ್ಪಿನ,ಶರಣಬಸವ ಬನ್ನಿಗೋಳ,

ಹನುಮಂತಪ್ಪ ಬೂದಿಹಾಳ, ಎಂ ವಿ ಕುಸುಮ ಜಿ, ಟಿ, ಲಕ್ಷ್ಮೀದೇವಮ್ಮ, ಕೆ ನಾಗರಾಜ, ರಾಮಪ್ಪ ಹಂಡಿ, ಸಂಗಮೇಶ ಖನ್ನಿನಾಯ್ಕರ, ಜೆ ಟಿ ಮಂಜುಳಾ,ಗೋವಿಂದ ಜುಜಾರೆ, ದಾವಣಗೆರೆ ಸಿದ್ದೇಶ,ನಾಗರಾಜ ಕಾಮನಹಳ್ಳಿ, ಹೊಂಬರಡಿ ಆರ್,ಡಿ, ಅಕ್ಬರಲಿ ಸೋಲಾಪುರ, ರಾಜೀವಸಿಂಗ ಹಲವಾಯಿ, ಕಾಶಪ್ಪ ದೊಡವಾಡ, ಸಿದ್ದಣ್ಣ ಉಕ್ಕಲಿ, ಕಿರಣ ರಘುಪತಿ ಚಂದ್ರಶೇಖರ್ ತಿಗಡಿ,ಎಂ ಐ ಮುನವಳ್ಳಿ,ಆರ್ ನಾರಾಯಣಸ್ವಾಮಿ ಚಿಂತಾಮಣಿ, ಫನೀಂದ್ರನಾಥ,ಡಿ ಎಸ್ ಭಜಂತ್ರಿ, ಬಿ ಎಸ್ ಮಂಜುನಾಥ, ರೇವಣ್ಣ ಎಸ್, ಎಸ್ ಆರ್ ಎಮ್ಮಿಮಠ, ತುಮಕೂರು ರವೀಶ, ಟಗರು ಪಂಡಿತ, ಕಲ್ಪನ ಚಂದನಕರ ರಾಜಶ್ರೀ ಪ್ರಭಾಕರ ಶಿವಲೀಲಾ ಪೂಜಾರ, ಶಿವಮೊಗ್ಗ ಸೋಮಶೇಖರ್,ಕೊಡಗು ರೋಜಿ, ಸುರೇಶ ಅರಳಿ ಅಶೋಕ ಬಿಸೆರೊಟ್ಟಿ, ಮಧುಗಿರಿ ದೇವರಾಜ ಲೀಲಾ ಮಹೇಶ್ವರ ಆರ್ ಐ ಹನಗಿ, ಕೋಲಾರ ಶ್ರೀನಿವಾಸ ಸೇರಿದಂತೆ ಹಲವರು ನಮನವನ್ನು ಸಲ್ಲಿಸಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk