ಬಿಸಿಯೂಟ ದಲ್ಲಿ ಇನ್ನೂ ಮುಂದೆ ಸಿಗಲಿದೆ ರಾಗಿ ಮುದ್ದೆ ಜೋಳದ ರೊಟ್ಟಿ – ಶೀಘ್ರದಲ್ಲೇ ಶಾಲೆಗಳಲ್ಲಿ ಯೋಜನೆ ಪ್ರಾರಂಭಿಸಲು ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ…..

Suddi Sante Desk

ಬೆಂಗಳೂರು

ಶಾಲೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಇನ್ನೂ ಮುಂದೆ ರಾಗಿ ಮುದ್ದೆ,ಜೋಳದ ರೊಟ್ಟಿ ನೀಡಲು ರಾಜ್ಯ ಸರ್ಕಾರ ನಿರ್ಧಾರವನ್ನು ಕೈಗೊಂಡಿದ್ದು ಪ್ರಾದೇಶಿಕ ಆಹಾರ ನೀಡಲು ಸರ್ಕಾರ ನಿರ್ಧರಿಸಿದೆ.

ಹೌದು ಮಕ್ಕಳಿಗೆ ಪೌಷ್ಟಿಕಾಂಶದ ಆಹಾರ ನೀಡುವ ಉದ್ದೇಶದಿಂದ ರಾಗಿ ಮುದ್ದೆ ಮತ್ತು ಜೋಳದ ರೊಟ್ಟಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.ಅಲ್ಲದೆ ಶೀಘ್ರವೇ ಯೋಜನೆ ಆರಂಭವಾಗಲಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದಲ್ಲಿ ಗೋಧಿ ಪಾಯಸ, ಅನ್ನ ಸಾಂಬಾರ್ ನೀಡಲಾಗುತ್ತಿದೆ.ಇದರೊಂದಿಗೆ ಉತ್ತರ ಕರ್ನಾಟಕ ಭಾಗದ ಶಾಲೆಗಳ ಮಕ್ಕಳಿಗೆ ಬಿಸಿಯೂಟದಲ್ಲಿ ಜೋಳದ ರೊಟ್ಟಿ,ದಕ್ಷಿಣ ಕರ್ನಾಟಕ ಭಾಗದ ಮಕ್ಕಳಿಗೆ ರಾಗಿಮುದ್ದೆ ನೀಡುವ ಕುರಿತು ಸಿದ್ಧತೆ ಕೈಗೊಳ್ಳಲಾಗಿದೆ.

ಎಲ್ಲಾ ಭಾಗದಲ್ಲಿಯೂ ಮುದ್ದೆ,ರೊಟ್ಟಿ ತಿನ್ನುವುದಿಲ್ಲ. ಹೀಗಾಗಿ ಆಯಾ ಪ್ರಾದೇಶಿಕತೆಗೆ ಅನುಗುಣವಾಗಿ ತಾಲೂ ಕುವಾರು ಮುದ್ದೆ,ರೊಟ್ಟಿ ನೀಡುವ ಬಗ್ಗೆ ಯೋಜನೆ ರೂಪಿಸಿದ್ದು ಶೀಘ್ರವೇ ಜಾರಿಗೆ ಬರಲಿದೆ.ಸರ್ಕಾರ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯಡಿ ಹಾಲು ನೀಡುತ್ತಿದೆ.ಇತ್ತೀಚೆಗೆ ಮೊಟ್ಟೆ,ಬಾಳೆಹಣ್ಣು,ಚಿಕ್ಕಿ ಕೂಡ ನೀಡಲಾಗುತ್ತಿದೆ. ಇದ ರೊಂದಿಗೆ ರಾಗಿ,ಮುದ್ದೆ ಜೋಳದ ರೊಟ್ಟಿ ನೀಡಲು ಕ್ರಮ ಕೈಗೊಳ್ಳಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.