ಕುಂದಗೋಳದ ರೊಟ್ಟಿಗವಾಡ ಗ್ರಾಮದ ಯೋಧ ಗಂಗಾಧರಯ್ಯ ಹೃದಯಾಘಾತದಿಂದ ಸಾವು ಕರ್ತವ್ಯದ ಮೇಳೆ ತೀವ್ರ ಹೃದಯಾ ಘಾತದಿಂದ ನಿಧನರಾದ BSF ಯೋಧ…..

Suddi Sante Desk

ಕುಂದಗೋಳ –

ಬಿಎಸ್ ಎಫ್ ನಲ್ಲಿ ಕರ್ತವ್ಯವನ್ನು ನಿರ್ವಹಣೆ ಮಾಡುತ್ತಿದ್ದ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ರೊಟ್ಟಿಗ ವಾಡ ಗ್ರಾಮದ ಯೋಧ ಗಂಗಾಧರಯ್ಯ ಚ ಹಿರೇಮಠ ನಿಧನರಾಗಿದ್ದಾರೆ.ಹೌದು ದೇಶದ ಸೇವೆಯಲ್ಲಿ ತೊಡಗಿ ಕೊಂಡಿದ್ದ ಜಿಲ್ಲೆಯ ಈ ಯೋಧನ ಕರ್ತವ್ಯದಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿದ್ದು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಆದರೂ ದಾರಿ ಮಧ್ಯ ದಲ್ಲಿಯೇ ಹೃದಯಾಘಾತವಾಗಿ ಸಾವಿಗೀಡಾಗಿದ್ದಾರೆ.

ಮೃತ ಯೋಧ ಗಂಗಾಧರಯ್ಯ ಅವರು ಪತ್ನಿ, ಮಗಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಇನ್ನೂ ಇವರ ಪಾರ್ಥಿವ ಶರೀರ ಇವತ್ತ ಸಂಜೆ ಇಲ್ಲವೇ ನಾಳೆ ತವರೂರಿಗೆ ಬರಲಿದ್ದು ಬಂದ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಾಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯ ಲಿದ್ದು ಮೃತರಿಗೆ ಜಿಲ್ಲೆಯ ಜನಪ್ರತಿನಿಧಿಗಳು ಸೇರಿದಂತೆ ಹಲವರು ತೀವ್ರ ಸಂತಾಪವನ್ನು ಸೂಚಿಸಿ ಭಾವಪೂರ್ಣ ನಮನ ಸಲ್ಲಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.