ತಾರಿಹಾಳ 2ನೇ ಹಂತದ ಋಣಮುಕ್ತ ಪತ್ರಗಳನ್ನು ವಿತರಣೆ ಮಾಡಿದ ಶಾಸಕ ಅರವಿಂದ ಬೆಲ್ಲದ ಕ್ಷೇತ್ರದಲ್ಲಿ ಮುಂದುವರಿದ ಅಭಿವೃದ್ಧಿ ಕಾರ್ಯಗಳು…..

Suddi Sante Desk

ಧಾರವಾಡ –

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಹುಬ್ಬಳ್ಳಿ ಶಹರದ ತಾರಿಹಾಳ 2ನೇ ಹಂತ ರಾಮನಗರ ಆಶ್ರಯ ಬಡಾವಣೆಯಲ್ಲಿ ಸುಮಾರು 18 ವರ್ಷಗಳಿಂದ ವಾಸಿಸುತ್ತಿರುವ ಅರ್ಹ ಬಡ ಫಲಾನುಭವಿಗಳಿಗೆ ಅಡ ಮಾನ ಋಣಮುಕ್ತ ಪತ್ರಗಳನ್ನು ವಿತರಿಸಲಾಯಿತು.

ಹೌದು ಹುಬ್ಬಳ್ಳಿಯ ಗೃಹ ಕಚೇರಿಯಲ್ಲಿ ನಡೆದ ಕಾರ್ಯ ಕ್ರಮ ದಲ್ಲಿ 282 ಬಡ ಫಲಾನುಭವಿಗಳಿಗೆ ಮನೆಯ ಹಕ್ಕು ಪತ್ರಗಳನ್ನು ವಿತರಣೆ ಮಾಡಿ ಕಳೆದ ಹಲವಾರು ವರ್ಷಗ ಳಿಂದ ಆತಂಕ ದಲ್ಲಿದ್ದ ನಿವಾಸಿಗಳಿಗೆ ಶಾಸಕರು ನೆಮ್ಮದಿ ಯೊಂದಿಗೆ ಸಂತೋಷವನ್ನು ಉಂಟು ಮಾಡಿದರು

ಈ ಒಂದು ಸಂದರ್ಭದಲ್ಲಿ ಅರಣ್ಯ ವಸತಿ ಹಾಗೂ ವಿಹಾರ ಧಾಮಗಳ ಸಂಸ್ಥೆಯ ಅಧ್ಯಕ್ಷರಾದ ರಾಜು ಕೋಟೆನವರ, ಮಂಡಲ ಅಧ್ಯಕ್ಷರಾದ ಬಸವರಾಜ ಗರಗ,ಪಾಲಿಕೆ ಸದಸ್ಯ ರಾದ ರಾಮಣ್ಣ ಬಡಿಗೇರ್,ಮುಖಂಡರಾದ ಬಿ. ವೆಂಕಟೇಶ್,

ಮಾರುತಿ ಈಳಗೇರ್,ಸುರೇಶ ಬದಾಮಿ,ಈರಣ್ಣ ಪೂಜಾರ್,ಹನುಮಂತ ಊಟಿ,ಸ್ವಾಮಿ ಮಹಾಜನ ಶೆಟ್ಟರ್,ಹನುಮಂತ ಹರಿಜನ್,ಮೈನುದ್ದಿನ್ ಮಿರ್ಜಿ, ಚಂದ್ರು ಸಂದಿಮಠ,ಶಿವು ಹುಲಕೊಪ್ಪ,ಶ್ರೀಮತಿ ಪ್ರತಿಭಾ ಕಾಟವೆ ಸೇರಿದಂತೆ ಇನ್ನಿತರರು ಹಾಗೂ ಮೂಲ ಫಲಾನು ಭವಿಗಳು ಉಪಸ್ಥಿತರಿದ್ದರು.

ವರದಿ – ಸಮೀದ್ ಶಾಸಕರ ಆಪ್ತ ಕಾರ್ಯದರ್ಶಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.