ರಾಜ್ಯ ಸರ್ಕಾರ ಸತ್ತು ಹೋಗಿದೆ ಮಾಜಿ ಸಚಿವ ಸಂತೋಷ ಲಾಡ್ ವಿದ್ಯುತ್ ದರ ಹೆಚ್ಚಳದ ವಿರುದ್ದ ಅಸಮಾಧಾನ

Suddi Sante Desk

ರಾಜ್ಯ ಸರ್ಕಾರ ಸಂಪೂರ್ಣವಾಗಿ ಸತ್ತು ಹೋಗಿದೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು.ಕಲಘಟಗಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಹತ್ತಾರು ಹಗರಣಗಳಲ್ಲಿ ಸಿಲುಕಿಕೊಂಡು ಭ್ರಷ್ಟಾಚಾರದಲ್ಲಿ ಮುಳುಗಿದ್ದು ಇತ್ತೀಚಿಗೆ ಹೋರಬರುತ್ತಿರುವ ಹತ್ತಾರು ಹಗರಣಗಳಿಂದ ಕಂಡು ಬರುತ್ತಿದೆ ಎಂದರು

ಇನ್ನೂ ಏಕಾಎಕಿಯಾಗಿ ವಿದ್ಯುತ್ ದರ ಹೆಚ್ಚಳ ಕುರಿತು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು.ಏಕಾಏಕಿ ಯಾಗಿ ಏರಿಕೆ ಮಾಡಿದ ಕುರಿತು ಕಿಡಿಕಾರಿ ಈಗಾಗಲೇ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದ ಜನರಿಗೆ ಅದರಲ್ಲೂ ರೈತರಿಗೆ ಬರೆ ಏಳೆದಂತಾಗಿದೆ ಎಂದರು ಕೂಡಲೇ ಇದನ್ನು ಪರಿಶೀಲನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯವನ್ನು ಮಾಡಿದರು

ಇನ್ನೂ ಕೇಂದ್ರ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ ಯಾವುದೇ ಒಂದೇ ಒಂದು ಯೋಜನೆಗಳು ಜನ ಸಾಮಾನ್ಯರ ಪರವಾಗಿಲ್ಲ ನಾನಂತೂ ಮನ್ ಕೀ ಬಾತ್ ನ್ನು ಬಿಟ್ಟರೆ ನೋಡಿಲ್ಲ ಎಂದರು.

ಆಗಸ್ಟ್ 15 ರಂದು ಕಲಘಟಗಿ ಕ್ಷೇತ್ರದಲ್ಲಿ ಕಾರ್ಯಕ್ರಮವನ್ನು ಯಶಸ್ಸುಗೊಳಿಸಿದ ಕ್ಷೇತ್ರದ ಜನರಿಗೆ ಪಕ್ಷದ ಕಾರ್ಯಕರ್ತರಿಗೆ ತುಂಬು ಹೃದಯದ ಧನ್ಯವಾದಗಳನ್ನು ಹೇಳಿದರು.

ಈ ಒಂದು ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೇಸ್ ಪಕ್ಷದ ಮುಖಂಡ ಮಂಜುನಾಥ ಮುರಳ್ಳಿ ಎಸ್ ಆರ್ ಪಾಟೀಲ ಮುಂಡರಗಿ ನಾಗರಾಜ,ನರೇಶ ಮಲೇನಾಡು ಹರಿಶಂಕರ ಮಠದ,ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.