ಹಿರಿಯ ಶಿಕ್ಷಕ ಡಿ ಆರ್ ಮೆಳವಂಕಿ ಇನ್ನೂ ನೆನಪು ಮಾತ್ರ – ಆದರ್ಶ ಶಿಕ್ಷಕನ ಸಾವಿಗೆ ಕಣ್ಣೀರಾಕಿದ ಶಿಕ್ಷಕ ಬಂಧುಗಳು

Suddi Sante Desk
ಹಿರಿಯ ಶಿಕ್ಷಕ ಡಿ ಆರ್ ಮೆಳವಂಕಿ ಇನ್ನೂ ನೆನಪು ಮಾತ್ರ – ಆದರ್ಶ ಶಿಕ್ಷಕನ ಸಾವಿಗೆ ಕಣ್ಣೀರಾಕಿದ ಶಿಕ್ಷಕ ಬಂಧುಗಳು

ಧಾರವಾಡ

 

ಹೌದು ಶಿಕ್ಷಣ ಇಲಾಖೆಯಲ್ಲಿ ಆದರ್ಶ ಪ್ರತಿಭಾ ವಂತ ಮಕ್ಕಳಿಗೆ ಪೋಷಕರಿಗೆ ತುಂಬಾ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದ ಡಿ ಆರ್ ಮೆಳವಂಕಿ ನಿಧನ ರಾಗಿದ್ದಾರೆ.ಕಳೆದ ಕೆಲ ದಿನಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದ ಇವರು ಇಂದು ಧಾರವಾಡ ದಲ್ಲಿ ನಿಧನರಾಗಿದ್ದಾರೆ.

 

ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ.ಡಿ.ಆರ್ ಮೆಳವಂಕಿ ಧಾರವಾಡದ HPS ವನಹಳ್ಳಿ ಯಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು ಅನಾ ರೋಗ್ಯದಿಂದ ಬಳಲುತ್ತಿದ್ದ ಇವರು ಬೆಳಿಗ್ಗೆ ನಿಧನ ರಾದರು.ಇವರ ಪತ್ನಿ ಕೂಡಾ ಶಿಕ್ಷಕಿಯರಾಗಿದ್ದು ಶ್ರೀಮತಿ ಎಸ್ ಎ ತೊರಗಲ್ HPS ಬಾಡದಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.

 

ಮೃತರ ಅಂತ್ಯಕ್ರಿಯೆ ಇಂದು ಸಾಯಂಕಾಲ 4 ಗಂಟೆಗೆ ಧಾರವಾಡದಲ್ಲಿ ನಡೆಯಲಿದೆ.ಮೃತರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲಿ ಅವರ ಕುಟುಂಬದ ಬಂಧು ಬಳಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಧಾರವಾಡ ತಾಲ್ಲೂಕಿನ ಜಿಲ್ಲೆಯ ಮತ್ತ ರಾಜ್ಯದ ಮೂಲೆ ಮೂಲೆಗಳಿಂದ ಸಮಸ್ತ ಶಿಕ್ಷಕ ಬಂಧುಗಳು ಸಂತಾಪದೊಂದಿಗೆ ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ.

 

 

ಅದರಲ್ಲೂ ಅವರ ಆಪ್ತರಾಗಿರುವ ಚಂದ್ರಶೇಖರ ತಿಗಡಿ,ಗುರು ತಿಗಡಿ,ಎಲ್ ಐ ಲಕ್ಕಮ್ಮನವರ, ಶ್ರೀಮತಿ ಸುಜಾತಾ ಕರಿಗಾರ,ಎಸ್ ಎ ಜಾಗೀರ ದಾರ,ಮಲ್ಲಿಕಾರ್ಜುನ ಉಪ್ಪಿನ,ಶಂಕರ ಘಟ್ಟಿ, ಶರಣಬಸವ ಬನ್ನಿಗೋಳ,ಸಿ ಮಹೇಶ್ ಮಂಡ್ಯ, ಆರ್ ನಾರಾಯಣಸ್ವಾಮಿ,ಡಾ ಲತಾ ಎಸ್ ಮುಳ್ಳೂರ ಸೇರಿದಂತೆ ಸಮಸ್ತ ಶಿಕ್ಷಕ ಬಂಧುಗಳು ಸಂತಾಪವನ್ನು ಸೂಚಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.