ವಿದೇಶದಲ್ಲೂ ಮೊಳಗಿತು ಕನ್ನಡದ ಕಹಳೆ ಥಾಯ್ಲೆಂಡ್​ನಲ್ಲೂ ತಾಯ್ನಾಡ ಅಭಿಮಾನ ಮೆರೆದ ಕನ್ನಡಿಗರು

Suddi Sante Desk
ವಿದೇಶದಲ್ಲೂ ಮೊಳಗಿತು ಕನ್ನಡದ ಕಹಳೆ ಥಾಯ್ಲೆಂಡ್​ನಲ್ಲೂ ತಾಯ್ನಾಡ ಅಭಿಮಾನ ಮೆರೆದ ಕನ್ನಡಿಗರು

ಥಾಯ್ಲೆಂಡ್

ಕನ್ನಡ ರಾಜ್ಯೋತ್ಸವದಂದು ಕರ್ನಾಟಕದಾದ್ಯಂತ ಕನ್ನಡದ ಕಲರವ ಕೇಳಿಬರುವುದು ಸರ್ವೇ ಸಾಮಾನ್ಯ ಆದರೆ ರಾಜ್ಯೋತ್ಸವದ ಈ ಒಂದು ಆಚರಣೆ ಕರ್ನಾಟಕದಾಚೆಗೂ ಕನ್ನಡದ ಕಹಳೆ ಮೊಳಗಿದೆ. ಹೌದು ಕನ್ನಡಿಗರು ಎಲ್ಲಾದರು ಇರು, ಎಂತಾದರು ಇರು ಎಂದೆಂದಿಗು ನೀ ಕನ್ನಡವಾ ಗಿರು ಎಂಬುದನ್ನು ಈ ಮೂಲಕ ಸಾಬೀತುಪಡಿ ಸಿದ್ದಾರೆ.

ರಾಜ್ಯದಲ್ಲಿ ಅಷ್ಟೇ ಅಲ್ಲದೇ ದೇಶದಾಚೆಗೆ ಕನ್ನಡದ ಕಹಳೆ ಮೊಳಗಿದ್ದೆಲ್ಲಿ ಎಂದರೆ ದೂರದ ಥಾಯ್ಲೆಂಡ್​ ನಲ್ಲಿ ಥಾಯ್ಲೆಂಡ್​ನ ರಾಜಧಾನಿ ಬ್ಯಾಂಕಾಕ್​ನಲ್ಲಿ ಕನ್ನಡಿಗರಾದ ಡಾ.ಲೇಖನಾ, ಕಲಾ,ಲತಾ, ಶಿಲ್ಪಾ,ಚಂದ್ರಶೇಖರ್‌, ಅಮೋಘ ವರ್ಷ,ಸಂಭ್ರಮ, ಮೌನಿಶಾ ಮತ್ತು ಭಾವನಾ ಅವರು ‘ಹಚ್ಚೇವು ಕನ್ನಡದ ದೀಪ’ ಎಂಬ ಗೀತೆಯ ಗಾಯನದ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಿದರು.

ಆ ಮೂಲಕ ಥಾಯ್ಲೆಂಡ್​ನಲ್ಲಿದ್ದರೂ ತಾಯ್ನಾಡ ಮರೆಯಲಾರೆವು ಎಂಬುದಕ್ಕೆ ಸಾಕ್ಷಿಯಾದರು. ಇದರೊಂದಿಗೆ ವಿದೇಶದಲ್ಲೂ ಮೊಳಗಿತು ಕನ್ನಡದ ಕಹಳೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.