ಸರ್ಕಾರಿ ಶಾಲಾ ಶಿಕ್ಷಕರ ಕರ್ತವ್ಯಕ್ಕೆ ಸಾಕ್ಷಿಯಾದ ಜಲದುರ್ಗ ಗ್ರಾಮ – ವರ್ಗಾವಣೆಗೊಂಡ ಶಿಕ್ಷಕನನ್ನು ಬಿಟ್ಟು ಕೋಡದ ಮಕ್ಕಳು…..

Suddi Sante Desk
ಸರ್ಕಾರಿ ಶಾಲಾ ಶಿಕ್ಷಕರ ಕರ್ತವ್ಯಕ್ಕೆ ಸಾಕ್ಷಿಯಾದ ಜಲದುರ್ಗ ಗ್ರಾಮ – ವರ್ಗಾವಣೆಗೊಂಡ ಶಿಕ್ಷಕನನ್ನು ಬಿಟ್ಟು ಕೋಡದ ಮಕ್ಕಳು…..

ಕೊಪ್ಪಳ

ಶಾಲೆಯಿಂದ ವರ್ಗಾವಣೆ ಗೊಂಡ ಶಿಕ್ಷಕರೊ ಬ್ಬರನ್ನು ಶಾಲೆಯಲ್ಲಿ ಮಕ್ಕಳು ಬಿಗಿದಪ್ಪಿ ಕೊಂಡ ಘಟನೆ ಲಿಂಗಸೂರು ತಾಲ್ಲೂಕಿನ ಜಲದುರ್ಗ ಗ್ರಾಮದಲ್ಲಿ ನಡೆದಿದೆ.ಸಧ್ಯ ಈ ಒಂದು ವಿಡಿಯೋ ಮತ್ತು ಪೊಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಲಿಂಗಸ್ಗೂರು ತಾಲ್ಲೂಕಿನ ಜಲದುರ್ಗ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆಯಾಗುವ ಮಕ್ಕಳು ಅಳುತ್ತಿರುವ ವಿಡಿಯೋ ಇದಾಗಿದೆ. ಇವರ ಹೆಸರು ಮಹೇಶ್ ಕುಮಾರ್ ಎಂಬುದಾ ಗಿತ್ತು ಮಕ್ಕಳನ್ನು ತುಂಬಾ ಪ್ರೀತಿಯಿಂದ ನೋಡಿ ಕೊಳ್ಳುತ್ತಿದ್ದರು.

ಪಾಠ ಮಾಡುವಾಗ ಮಕ್ಕಳನ್ನು ಗದರುತ್ತಿರಲಿಲ್ಲ. ಆ ಕಾರಣಕ್ಕಾಗಿ ಎಲ್ಲಾ ಮಕ್ಕಳಿಗೂ ಈ ಶಿಕ್ಷಕರೆಂ ದರೆ ತುಂಬಾ ಇಷ್ಟವಾಗಿತ್ತು ಎಲ್ಲಾ ಮಕ್ಕಳನ್ನು ಒಂದೇ ರೀತಿಯಲ್ಲಿ ಪ್ರೀತಿಯಲ್ಲಿ ನೋಡಿಕೊಳ್ಳು ತ್ತಿರುವುದಕ್ಕಾಗಿಯೇ ಇಷ್ಟೊಂದು ಮಕ್ಕಳು ಅಲ್ಲಿ ಬಂದು ಅತ್ತಿದ್ದಾರೆ.

ಬೈಕ್​ನಲ್ಲಿ ಶಿಕ್ಷಕರು ಮರಳಿ ತೆರಳಲು ಸಿದ್ಧರಾದ ಸಂದರ್ಭದಲ್ಲಿ ಶಿಕ್ಷಕರನ್ನು ಬಿಗಿದಪ್ಪಿ ಮಕ್ಕಳು ಅತ್ತ ಘಟನೆಯನ್ನು ನೀವಿಲ್ಲಿ ನೋಡಬಹುದು. ಇದೇ ನಿಜವಾದ ಗುರು ಶಿಷ್ಯರ ಅನುಭಂದ. ಬೇರೆಡೆಗೆ ಹೋಗದಂತೆ ಶಿಕ್ಷಕರ ಕೈ ಹಿಡಿದು ವಿದ್ಯಾರ್ಥಿಗಳ ರೋಧನೆ.

ಸುದ್ದಿ ಸಂತೆ ನ್ಯೂಸ್ ಕುಷ್ಟಗಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.