This is the title of the web page
This is the title of the web page

Live Stream

[ytplayer id=’1198′]

August 2025
T F S S M T W
 123456
78910111213
14151617181920
21222324252627
28293031  

| Latest Version 8.0.1 |

State News

ಶಿಕ್ಷಕನಿಗೆ ಕಡ್ಡಾಯ ನಿವೃತ್ತಿ ನೀಡಿದ ಇಲಾಖೆ – ಶಾಲೆಯಿಂದ ಬಿಡುಗಡೆ ಗೊಳಿಸಿ ಕಳಿಸಿದ ಅಧಿಕಾರಿಗಳು

WhatsApp Group Join Now
Telegram Group Join Now

ಮಧುಗಿರಿ –

ಶಿಕ್ಷಕರೊಬ್ಬರಿಗೆ ಕಡ್ಡಾಯ ನಿವೃತ್ತಿ ನೀಡಿ ಕಳಿಸಿದ ಘಟನೆ ಮಧುಗಿರಿ ಯಲ್ಲಿ ನಡೆದಿದೆ.ಹೌದು ಇವರು ಕಂದಾಯ ಇಲಾಖೆಯ ದಾಖಲೆಯನ್ನು ತಿದ್ದಿರುವ ಆರೋಪದ ಮೇಲೆ ಸಾಬೀತಾಗಿದ್ದು ಹೀಗಾಗಿ ಈ ಹಿಂದೆ ಲೋಕಾಯುಕ್ತರು ನೀಡಿದ ದೂರಿನ ಮೇರೆಗೆ ಆ ಶಿಕ್ಷಕರಿಗೆ ಕಡ್ಡಾಯ ನಿವೃತ್ತಿಯನ್ನು ನೀಡಿ ಆದೇಶಿ ಸಲಾಗಿದೆ.ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಗೊಲ್ಲರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಕೆ.ಕೆಂಪಯ್ಯ ಅವರನ್ನು ನಿನ್ನೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಮ್ಮುಖ ದಲ್ಲಿ ಕಡ್ಡಾಯ ನಿವೃತ್ತಿಗೊಳಿಸಿ ಶಾಲೆಯಿಂದ ಬಿಡುಗಡೆ ಮಾಡಲಾಯಿತು.

ಶಿಕ್ಷಕ ಕೆ.ಕೆಂಪಯ್ಯ ನೇರಳೆಕೆರೆ ಗ್ರಾಮದ ಸರ್ವೆ ನಂಬರ್ 88/3ರ ಜಮೀನಿಗೆ ಸಂಬಂಧಿಸಿದ ಎಂ.ಆರ್ ರಿಜಿಸ್ಟರ್‌ನಲ್ಲಿ ಬಾದಯ್ಯ ಬಿನ್ ಅವನಪ್ಪ ಎಂದು ಇರುವುದನ್ನು ಬಾದಯ್ಯ ಬಿನ್ ಮಾಸಣ್ಣ ಎಂದು ತಿದ್ದಿದ್ದಾರೆ.ಈ ಸಂಬಂಧ ಗೊಲ್ಲರಹಟ್ಟಿಯ ಈರಣ್ಣ ಬಿನ್ ಅವನಪ್ಪ ಅವರು ತಹಶೀಲ್ದಾರ್‌ ಮತ್ತು ಪೋಲಿಸರಿಗೆ ದೂರು ಸಲ್ಲಿಸಿದ್ದರು.ಆದರೆ ಕೆಂಪಯ್ಯ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕಾರಣ ಲೋಕಾಯುಕ್ತ, ಇಲಾಖೆಗೆ ದೂರು ನೀಡಿದ್ದರು.

2003ರ ಏಪ್ರಿಲ್ 22ರಂದು ಕೆಂಪಯ್ಯ ತಾಲ್ಲೂಕು ಕಚೇರಿಯ ದಾಖಲೆ ವಿಭಾಗದ ಎಫ್‌ಡಿಸಿ ಬಳಿ ತೆರಳಿ ಸರ್ವೆ ನಂಬರ್‌ 88/3 ರಿಜಿಸ್ಟರ್ ಕೇಳಿ ಪಡೆದಿದ್ದಾರೆ. ಎಫ್‌ಡಿಸಿ ಅವರು ಬೇರೆ ಕೆಲಸದಲ್ಲಿ ನಿರತರಾಗಿದ್ದಾಗ ಎಂ.ಆರ್ ರಿಜಿಸ್ಟರ್‌ನಲ್ಲಿ ಹೆಸರನ್ನು ತಿದ್ದಿದ್ದರು. ಆರೋಪ ಸಾಬೀತಾದ ಕಾರಣ ಶಿಕ್ಷಣ ಇಲಾಖೆ (ಪ್ರಾಥಮಿಕ)ಅಧೀನ ಕಾರ್ಯದರ್ಶಿ ಎಚ್.ಎಸ್. ಶಿವಕುಮಾರ್ ಅವರು ಕಡ್ಡಾಯ ನಿವೃತ್ತಿಗೆ ಆದೇಶಿಸಿ ದ್ದಾರೆ.ಈ ಆದೇಶದನ್ವಯ ಮಧುಗಿರಿ ಬಿಇಒ ಶಾಲೆಗೆ ತೆರಳಿ ಈ ಶಿಕ್ಷಕನನ್ನು ನಿನ್ನೆ ಶಾಲೆಯಿಂದ ಬಿಡುಗಡೆಗೊಳಿಸಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk