ಲೋಕಾಯುಕ್ತ ಬಲೆಗೆ ಬಿದ್ದ PSI ಮತ್ತು ಕಾನ್‌ಸ್ಟೆಬಲ್‌ – 30 ಲಕ್ಷ ವ್ಯವಹಾರ ಮುಂಗಡ ಹಣ ತಗೆದುಕೊಳ್ಳುವಾಗ ಇಬ್ಬರು ಲಾಕ್…..

Suddi Sante Desk
ಲೋಕಾಯುಕ್ತ ಬಲೆಗೆ ಬಿದ್ದ PSI ಮತ್ತು ಕಾನ್‌ಸ್ಟೆಬಲ್‌ – 30 ಲಕ್ಷ ವ್ಯವಹಾರ ಮುಂಗಡ ಹಣ ತಗೆದುಕೊಳ್ಳುವಾಗ ಇಬ್ಬರು ಲಾಕ್…..

ದೇವದುರ್ಗ

50 ಸಾವಿರ ರೂಪಾಯಿ ಲಂಚವನ್ನು ಪಡೆಯು ವಾಗ PSI ಮತ್ತು ಪೊಲೀಸ್ ಕಾನ್‌ಸ್ಟೆಬಲ್‌ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ರಾಯ ಚೂರಿನ ದೇವದುರ್ಗ ದಲ್ಲಿ ನಡೆದಿದೆ ಹೌದು ತಾಲ್ಲೂಕಿನ ಗಬ್ಬೂರು ಪೊಲೀಸ್‌ ಠಾಣೆಯ ಪಿಎಸ್‌ಐ ಮಂಜುನಾಥ ಟಿ.ಡಿ ಹಾಗೂ ಪೊಲೀಸ್ ಕಾನ್‌ಸ್ಟೆಬಲ್‌ ರಮೇಶ ಲೋಕಾಯುಕ್ತ ಬಲೆಗೆ ಬಿದ್ದವರಾಗಿದ್ದಾರೆ.

₹50 ಸಾವಿರ ಲಂಚ ಪಡೆಯುವ ವೇಳೆ ರಾಯಚೂರು ಲೋಕಾಯುಕ್ತ ಪೊಲೀಸ್‍ ವರಿಷ್ಠಾಧಿಕಾರಿ ಎಂ.ಎನ್‍. ಶಶಿಧರ್ ನೇತೃತ್ವದ ತಂಡದ ಬಲೆಗೆ ಬಿದ್ದಿದ್ದಾರೆ.ಗಬ್ಬೂರು ಗ್ರಾಮದ ಫಾರೂಕ್ ಎಂಬ ಯುವಕನಿಂದ ₹50 ಸಾವಿರ ಪಡೆಯುತ್ತಿದ್ದಾಗ ಲೋಕಾಯುಕ್ತ ತಂಡ ದಾಳಿ ನಡೆಸಿ ಬಂಧಿಸಿದೆ.

ಮೇ 10ರಂದು ಗಬ್ಬೂರು ಗ್ರಾಮದ ಖಾಸಗಿ ಬ್ಯಾಂಕ್ ಉದ್ಯೋಗಿ ಫಾರೂಕ್‌ನನ್ನು ಕ್ರಿಕೆಟ್ ಬೆಟ್ಟಿಂಗ್ ಆರೋಪದ ಮೇಲೆ ವಶಕ್ಕೆ ಪಡೆದಿ ದ್ದರು.ಪ್ರಕರಣ ದಾಖಲಿಸದಿರಲು ₹3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಫಾರೂಕ್ ಹೇಳಿದ್ದು

ಫಾರೂಕ್ ವಿರುದ್ಧ ಕ್ರಿಕೆಟ್ ಬೆಟ್ಟಿಂಗ್ ಕೇಸ್ ದಾಖಲಿಸಿಕೊಳ್ಳದೆ ಇರಲು ಪಿಎಸ್‌ಐ ಮಂಜುನಾಥ ಕಾನ್‌ಸ್ಟೆಬಲ್‌ ರಮೇಶ ಮೂಲಕ ಪ್ರಾರಂಭದಲ್ಲಿ ₹10 ಲಕ್ಷಕ್ಕೆ ಬೇಡಿಕೆ ಇಟ್ಟು ನಂತರ ₹3 ಲಕ್ಷಕ್ಕೆ ವ್ಯವಹಾರ ಕುದುರಿಸಿದ್ದರು.

ಈ ಒಂದು ಕುರಿತು ಫಾರೂಕ್ ಲೋಕಾಯುಕ್ತರಿಗೆ ದೂರು ನೀಡಿದ್ದರು.ದೂರಿನ ಹಿನ್ನೆಲೆಯಲ್ಲಿ ₹50 ಸಾವಿರ ಹಣ ನೀಡುವಾಗ ಕಾನ್‌ಸ್ಟೆಬಲ್‌ ರಮೇಶ ಸಿಕ್ಕಿಬಿದ್ದಿದ್ದಾನೆ. ಸಧ್ಯ ಇಬ್ಬರನ್ನು ವಶಕ್ಕೆ ತೆಗೆದು ಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ದೇವದುರ್ಗ…..

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.