ಬೆಂಗಳೂರು –
ನಾಡಿನ ಶಿಕ್ಷಕರ ವರ್ಗಾವಣೆಯ ವಿಚಾರದಲ್ಲಿ ಸ್ಪಂದಿಸದ ಹಿನ್ನಲೆಯಲ್ಲಿ ನಾಡಿನ ಶಿಕ್ಷಕರು ಮತ್ತೊಂದು ಮಹತ್ವದ ತೀರ್ಮಾನಕ್ಕೆ ಬಂದಿದ್ದಾರೆ. ಹೌದು ಕಳೆದ ಹಲವಾರು ವರ್ಷಗಳಿಂದ ವರ್ಗಾವಣೆ ಸಿಗದೇ ಪರದಾಡುತ್ತಿರುವ ರಾಜ್ಯದ ಶಿಕ್ಷಕರು ಈಗ ಈಗ ಸಂಘಕ್ಕೆ ಬಹಿಷ್ಕಾರ ಹಾಕಲು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಹೌದು ಈವರೆಗೆ ವರ್ಗಾವಣೆ ಆಗುತ್ತದೆ ಆಗುತ್ತದೆ ಎಂದುಕೊಂಡು ಕಾದು ಕಾದು ಬೇಸತ್ತ ಶಿಕ್ಷಕರು ಈಗ ಸಿಡಿದೆದ್ದಿದ್ದಾರೆ.ನಮಗೂ ಒಮ್ಮೆಯಾದರೂ ವರ್ಗಾವಣೆ ಅವಕಾಶ ಕಲ್ಪಿಸಿ ಎಂದು ಕೇಳಿ ಈಗ ಸಂಘದ ವಿರುದ್ಧ ತಿರುಗಿ ಬಿದ್ದು ಅಲ್ಲದೇ ದಿಕ್ಕಾರ ಹಾಕಲು ಮುಂದಾಗಿದ್ದಾರೆ ಇನ್ನಾದರು ಶಿಕ್ಷಕರು ಬೀದಿಗಿಳಿಯುವ ಮುನ್ನ ಸಂಘಟನೆಯ ನಾಯಕರು ಎಚ್ಚೇತ್ತುಕೊಂಡು ವರ್ಗಾವಣೆಗೆ ಧ್ವನಿ ಎತ್ತಬೇಕು ಇಲ್ಲವಾದರೆ ಶಿಕ್ಷಕರು ಬೀದಿಗಿಳಿಯಲಿದ್ದಾರೆ.