ಬೆಂಗಳೂರು –
ಗೆ,
ಮಾನ್ಯ ಶ್ರೀ ಶಂಭುಲಿಂಗನಗೌಡ್ರ
ರಾಜ್ಯಾಧ್ಯಕ್ಷರು
KSPSTA BANGLORE
ಮಾನ್ಯರೆ,
ವಿಷಯ: ನೀವೆ ಮಾಡಿದ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಕುರಿತು
ಮೇಲ್ಕಾಣಿಸಿದ ವಿಷಯ ಏನೆಂದರೆ ನೀವೆ ಸಹಿ ಮಾಡಿದ ಸಂಘದ ಆದೇಶದ ಪ್ರಕಾರ ನಿಮ್ಮ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮಾನ್ಯತೆ ಪಡೆಯದ ಸಂಘದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅವರೇ ಸಹಿ ಮಾಡಿದ ಸುತ್ತೋಲೆಯನ್ನು ಉಲ್ಲಂಘಿಸಿದ್ದಾರೆ ಅಲ್ಲದೇ ಇದೇ ಪ್ರಧಾನ ಕಾರ್ಯದರ್ಶಿಗಳು ಅಹಿಂದ ಸಂಘಟನೆ ಅಂತಾ ಗಟ್ಟಿಗೊಳಿಸಲು ಕೆಲ ಚಿಂತಕರನ್ನು ಬೇಟಿಯಾಗಿ ಚರ್ಚಿಸು ತ್ತಿರುವ ಪೋಟೋ ಎಂದು ಅವರ ಹಿಂಬಾಲಕರೇ ಹಾಕಿದ ಪೋಟೋ ಕೂಡಾ ತಾವು ಗಮನಿಸಿದ್ದೀರೆಂದು ಅಂದುಕೊ ಳ್ಳುವೆ.ಅಲ್ಲದೇ ನಿಮ್ಮ ಸಂಘದ ಪ್ರತಿಯೊಂದು ಸಭೆಯಲ್ಲಿ ಫಿಕ್ಸ್ ಮುಖ್ಯ ಅತಿಥಿ ಸ್ಥಾನ ಹೊಂದಿರುವ AIPTF ನ ನಿವೃತ್ತ ನಾಯಕರು ಇವಾಗ ಮಾನ್ಯತೆ ಪಡೆಯದ ಸಂಘ ರಚಿಸಿ ಅಧ್ಯಕ್ಷರು ಎಂದು ಕಾರ್ಯಕ್ರಮ ಮಾಡುತ್ತಿದ್ದು ಇದು ನೇರವಾಗಿ ನಮ್ಮ KSPSTA ಸಂಘದ ಅಸ್ತಿತ್ವಕ್ಕಾಗಿ ತೊಂದರೆ ಇದ್ದು ಈ ರೀತಿ ಸಂಘ ವಿರೋಧಿ ಚಟುವಟಿಕೆ ಗಳಲ್ಲಿ ತೊಡಗಿರುವ & ಮಾನ್ಯತೆ ಪಡೆಯದ ಸಂಘದಲ್ಲಿ ಕ್ರಿಯಾಶೀಲರಾಗಿರುವ ಪ್ರಧಾನ ಕಾರ್ಯದರ್ಶಿಗಳು & AIPTF ನ ನಾಯಕರ ವಿರುದ್ಧ ಶಿಸ್ತುಕ್ರಮದ ನೋಟಿಸ್ ಜಾರಿ ಮಾಡಿ ಅವರನ್ನು ಸಂಘದಿಂದ ಉಚ್ಛಾಟಿಸಿ ಸಂಘ ಉಳಿಸಲು ಕೋರಿಕೆ,,, ಅಲ್ಲದೇ ಪ್ರಾಮಾಣಿಕರಾದ ತಾವು ಗಳು ಇವರ ಹಿಂದಿನ ಅವಧಿಯಲ್ಲಿನ ಅವ್ಯವಹಾರಗಳನ್ನು ತಾವುಗಳು ತನಿಖೆ ನಡೆಸಲು& ಎಲ್ಲ ಜಿಲ್ಲೆ & ತಾಲೂಕು ಗಳಿಗೂ ಸದಸ್ಯತ್ವ ಶುಲ್ಕದ ಪಾಲು ನೀಡಲು ಕೋರುತ್ತೇವೆ.. ತಪ್ಪು ಯಾರೇ ಮಾಡಿದರೂ ತಪ್ಪೇ, ಕೇವಲ ಸಾಮಾನ್ಯ ಶಿಕ್ಷಕರ ಮೇಲೆ ದರ್ಪ ತೋರುವುದಕ್ಕಿಂತ ಇಂತಹ ನಾಯಕರ ವಿರುದ್ಧ ಕ್ರಮಕೈಗೊಳ್ಳಲು ಕೋರಿಕೆ
ಧನ್ಯವಾದಗಳು
ಇಂತಿ
KSPSTA ದ ಸಾಮಾನ್ಯ ಸದಸ್ಯ